ಅರಸಿಕೆರೆ ಕ್ಷೇತ್ರದ ಹಾಲಿ ಅಭ್ಯರ್ಥಿ ಶಿವಲಿಂಗೇಗೌಡರನ್ನು ಕೈಬಿಟ್ಟು ಹೊಸ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್ ಘೋಷಣೆ

 

 

ಹಾಸನ: ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗಿದ್ದು, ಈ ಬಾರಿ ಹಾಸನ ಜಿಲ್ಲೆಯ ಅರಸಿಕೆರೆ ಕ್ಷೇತ್ರದ ಹಾಲಿ ಅಭ್ಯರ್ಥಿ ಶಿವಲಿಂಗೇಗೌಡರನ್ನು ಕೈಬಿಟ್ಟು ಹೊಸ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಲಾಗಿದೆ.

ಅರಸಿಕೆರೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬಾಣಾವರ ಅಶೋಕ್ ಗೆ ಅರಸಿಕೆರೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಸೆಡ್ಡು ಹೊಡೆದಿದ್ದಾರೆ.

ಸಮಾವೇಶದಲ್ಲಿ ಹಾಲಿ ಶಾಸಕ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಪಕ್ಷವನ್ನು ಹಂತಹಂತವಾಗಿ ಮುಗಿಸಲು ಯತ್ನಿಸಿದ್ದರು. ಸಭೆಗೆ ಹೋಗದಂತೆ ಹಣ ಹಂಚಿಕೆ ಮಾಡಿದ್ದಾರೆ. ನಿನ್ನೆ ಕೂಡ ಶಿವಲಿಂಗೇಗೌಡರ ಜತೆ ಹೆಚ್.ಡಿ. ರೇವಣ್ಣ ಮಾತನಾಡಿ, ದುಡುಕಬೇಡಿ ಜೆಡಿಎಸ್ ನಲ್ಲಿಯೇ ಇರುವಂತೆ ಹೇಳಿದ್ದರು ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಟರ್ಕಿ ಜನರ ಪಾಲಿಗೆ ಭಾರತೀಯ ವೈದ್ಯರು ಅಕ್ಷರಶಃ ದಾರಿದೀಪದಂತಾಗಿದ್ದು, ದಿನಕ್ಕೆ 400ಕ್ಕೂ ಮಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

Mon Feb 13 , 2023
  ಇಸ್ತಾಂಬುಲ್‌: ಭೂಕಂಪದಿಂದ ತತ್ತರಿಸಿಹೋಗಿರುವ ಟರ್ಕಿ ಜನರ ಪಾಲಿಗೆ ಭಾರತೀಯ ವೈದ್ಯರು ಅಕ್ಷರಶಃ ದಾರಿದೀಪದಂತಾಗಿದ್ದು, ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಹಗಲು ರಾತ್ರಿಯೆನ್ನದೆ ದಿನಕ್ಕೆ 400ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವಶೇಷಗಳಡಿ ಸಿಕ್ಕಿಬಿದ್ದ ಜನರು, ನರಳಾಟ, ಸಾವು, ನೋವುಗಳ ನಡುವೆಯೇ ಪ್ರಕೃತಿಯ ವೈಪರೀತ್ಯವನ್ನು ಭಾರತೀಯ ಯೋಧರು ಹಾಗೂ ವೈದ್ಯರು ಮೀರಿ ನಿಂತು ಸಹಾಯ ಹಸ್ತಚಾಚಿದ್ದಾರೆ. ಕನಿಷ್ಠ ತಾಪಮಾನವು ಮೈನಸ್‌ಗೆ ತಲುಪಿರುವ ನಡುವೆಯೇ, 90 ಯೋಧರ ತಂಡ 60 ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿದೆ. […]

Advertisement

Wordpress Social Share Plugin powered by Ultimatelysocial