ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹೆಚ್ಚಾಗುತ್ತಿರುವುದರಿಂದ ನಾಳೆಯಿಂದ ಲಾಕ್ ಡೌನ್ ಮಾಡಲಾಗುವ ಹಿನ್ನಲೆಯಲ್ಲಿ ಜನರು ತಮ್ಮ ತಮ್ಮ ಊರುಗಳತ್ತ ವಲಸೆ ಹೋಗುತ್ತಿದ್ದಾರೆ. ಹೌದು ಕರ್ನಾಟಕ ಗಡಿಭಾಗ ಅತ್ತಿಬೆಲೆಯಲ್ಲಿ ತಮಿಳುನಾಡಿಗೆ ವಲಸೆ ಹೋಗುತ್ತಿದ್ದಾರೆ. ಮನೆ ಖಾಲಿ ಮಾಡಿಕೊಂಡು ಟಾಟಾ ಏಸ್, ಟೆಂಪೋ ಗಳಲ್ಲಿ ಮನೆಯ ವಸ್ತುಗಳನ್ನು ತುಂಬಿಕೊಂಡು ಪ್ರಯಾಣ. ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ತಮ್ಮ ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ರಾಜ್ಯದಿಂದ ಹೆಚ್ಚಾಗಿ ತಮಿಳುನಾಡಿನತ್ತ ಪ್ರಯಾಣ ಮಾಡುತ್ತಿರುವ ಜನರಿಂದ ಹೆಚ್ಚಾಗಿ ಮರಳಿ ಹೋಗುತ್ತಿರುವ ಹಿನ್ನೆಲೆ ಗಡಿಭಾಗ ಅತ್ತಿಬೆಲೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಲಾಕ್ಡೌನ್ ಹಿನ್ನಲೆಯಲ್ಲಿ ವಲಸೆ ಹೊರಟ ಜನ
Please follow and like us: