ಬೆಂಗಳೂರು: ಕೌಟಿಂಬಿಕ ಕಲಹದಿಂದ ಬೇಸತ್ತು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವೇಶ್ವರ ನಗರದ ಮಂಜುನಾಥನಗರದ 6ನೇ ಕ್ರಾಸ್ನಲ್ಲಿ ನಡೆದಿದೆ.
ಚಾಂದ್ ಪಾಷ (31) ಮೃತ ದುರ್ದೈವಿ. ಈತನ ಪತ್ನಿಗೆ ಆಡಂಬರದ ಜೀವನ ನಡೆಸಬೇಕೆಂಬ ಗೀಳಿತ್ತು.
ಪ್ರತಿದಿನ ಹೊರಗೆ ಸುತ್ತಾಡಬೇಕು. ಒಳ್ಳೊಳ್ಳೆ ಬಟ್ಟೆ, ಚಿನ್ನಾಭರಣ ಧರಿಸಬೇಕೆಂಬ ಆಸೆಯಿತ್ತು. ಆದರೆ, ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಚಾಂದ್ ಪಾಷನಿಗೆ ಇದು ಕಷ್ಟವಾಗಿತ್ತು. ಪತ್ನಿ ಅಂದುಕೊಂಡಿರುವ ರೀತಿಯಲ್ಲಿ ಜೀವನ ನಡೆಸಲು ಆಗುತ್ತಿರಲಿಲ್ಲ. ಇದೇ ವಿಚಾರವಾಗಿ ಆಗಾಗ ಮನೆಯಲ್ಲಿ ಜಗಳವಾಗುತ್ತಿತ್ತು.
ನಿನ್ನೆ ಕೂಡ ಜಗಳ ನಡೆದು ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ದರು. ಪತ್ನಿ ರೂಮ್ನಲ್ಲಿ ಮಲಗಿದ್ರೆ, ಪತಿ ಹಾಲ್ನಲ್ಲಿ ಮಲಗಿದ್ದ. ಈ ಸಂದರ್ಭದಲ್ಲಿ ಚಾಂದ್ ಪಾಷ ಹಾಲ್ನಲ್ಲೇ ನೇಣಿಗೆ ಶರಣಾಗಿದ್ದಾನೆ. ಚಾಂದ್ ಪಾಷ ಮತ್ತು ಉಸ್ನಾ (26) ಎಂಬಾಕೆಗೆ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಇಬ್ಬರಿಗೂ ಇದು ಎರಡನೇಯ ಮದುವೆಯಾಗಿತ್ತು. ಉಸ್ನಾ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada