ಆಡಂಬರ ಜೀವನದ ಗೀಳಿಗೆ ಬಿದ್ದ ಪತ್ನಿ: ಪತಿ ಆತ್ಮಹತ್ಯೆಗೆ ಶರಣು .

ಬೆಂಗಳೂರು: ಕೌಟಿಂಬಿಕ ಕಲಹದಿಂದ ಬೇಸತ್ತು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವೇಶ್ವರ ನಗರದ ಮಂಜುನಾಥನಗರದ 6ನೇ ಕ್ರಾಸ್​ನಲ್ಲಿ ನಡೆದಿದೆ.

ಚಾಂದ್ ಪಾಷ (31) ಮೃತ ದುರ್ದೈವಿ. ಈತನ ಪತ್ನಿಗೆ ಆಡಂಬರದ ಜೀವನ ನಡೆಸಬೇಕೆಂಬ ಗೀಳಿತ್ತು.

ಪ್ರತಿದಿನ ಹೊರಗೆ ಸುತ್ತಾಡಬೇಕು. ಒಳ್ಳೊಳ್ಳೆ ಬಟ್ಟೆ, ಚಿನ್ನಾಭರಣ ಧರಿಸಬೇಕೆಂಬ ಆಸೆಯಿತ್ತು. ಆದರೆ, ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಚಾಂದ್ ಪಾಷನಿಗೆ ಇದು ಕಷ್ಟವಾಗಿತ್ತು. ಪತ್ನಿ ಅಂದುಕೊಂಡಿರುವ ರೀತಿಯಲ್ಲಿ ಜೀವನ ನಡೆಸಲು ಆಗುತ್ತಿರಲಿಲ್ಲ. ಇದೇ ವಿಚಾರವಾಗಿ ಆಗಾಗ ಮನೆಯಲ್ಲಿ ಜಗಳವಾಗುತ್ತಿತ್ತು.

ನಿನ್ನೆ ಕೂಡ ಜಗಳ ನಡೆದು ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ದರು. ಪತ್ನಿ ರೂಮ್​ನಲ್ಲಿ ಮಲಗಿದ್ರೆ, ಪತಿ ಹಾಲ್​ನಲ್ಲಿ ಮಲಗಿದ್ದ. ಈ ಸಂದರ್ಭದಲ್ಲಿ ಚಾಂದ್ ಪಾಷ ಹಾಲ್​ನಲ್ಲೇ ನೇಣಿಗೆ ಶರಣಾಗಿದ್ದಾನೆ. ಚಾಂದ್ ಪಾಷ ಮತ್ತು ಉಸ್ನಾ (26) ಎಂಬಾಕೆಗೆ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಇಬ್ಬರಿಗೂ ಇದು ಎರಡನೇಯ ಮದುವೆಯಾಗಿತ್ತು. ಉಸ್ನಾ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯ್ ದೇವರಕೊಂಡ ಅವರ "ಲೈಗರ್" ಗಾಗಿ ಸಮಂತಾ ವಿಶೇಷ ನೃತ್ಯ ಶೂಟ್ ಮಾಡುತ್ತಾರೆಯೇ?

Tue Jan 25 , 2022
ಅಲ್ಲು ಅರ್ಜುನ್ ಅವರ ಸ್ಟಿರರ್ “ಪುಷ್ಪ: ದಿ ರೈಸ್” “ಊ ಅಂತವ” (ತಮಿಳಿನಲ್ಲಿ ಓ ಸೋಲ್ರಿಯಾ) ನಲ್ಲಿ ತ್ವರಿತ ನೃತ್ಯದ ಮೂಲಕ ಸಮಂತಾ ಶಾಖದ ಪ್ರಮಾಣವನ್ನು ಹೆಚ್ಚಿಸಿದರು. ನಟಿ ಈ ಸಂಖ್ಯೆಯಲ್ಲಿ ಅವರ ಅಭಿನಯಕ್ಕಾಗಿ ಸಾಕಷ್ಟು ಪ್ರೀತಿಯನ್ನು ಪಡೆದಿದ್ದಾರೆ ಮತ್ತು ಅವರ ಜನಪ್ರಿಯತೆಯು ಸಮಂತಾಗೆ ಮತ್ತೊಂದು ವಿಶೇಷ ಹಾಡನ್ನು ಗೆದ್ದಿದೆ ಎಂದು ತೋರುತ್ತದೆ. ನ್ಯೂಸ್ ಪೋರ್ಟಲ್ ಪ್ರಕಾರ, ಸಮಂತಾ “ಲೈಗರ್” ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಅವರು ಈ ವಿಜಯ್ […]

Advertisement

Wordpress Social Share Plugin powered by Ultimatelysocial