ಆಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್- ಯುವ ಕ್ರಿಕೆಟಿಗ ದುರ್ಮರಣ

ಹಮದಾಬಾದ್: ಇತ್ತೀಚೆಗೆ ಹಲವು ಮಂದಿ ಯುವಕರು ಹೃದಯಾಘಾತ (Heart Attack) ಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಕಬಡ್ಡಿ ಹಾಗೂ ಕ್ರಿಕೆಟ್ ಆಡುವಾಗ ಯುವಕರು ಹಾರ್ಟ್ ಅಟ್ಯಾಕ್‍ಗೆ ತುತ್ತಾಗುತ್ತಿರುವುದು ವಿಶೇಷ.

ಇದೀಗ ಇಂಥದ್ದೇ ಘಟನೆಯೊಂದು ಅಹಮದಾಬಾದ್‍ನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ವಸಂತ್ ರಾಥೋಡ್ (34) ಎಂದು ಗುರುತಿಸಲಾಗಿದೆ. ಇವರು ರಾಜ್ಯ ಸರಕು ಹಾಗೂ ಸೇವಾ ತೆರಿಗೆ ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಎಂದಿನಂತೆ ವಸಂತ್ ಕ್ರಿಕೆಟ್ (Cricket) ಆಡುತ್ತಿದ್ದರು. ಅಂತೆಯೇ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆಯಾಸ ಉಂಟಾಗಿ ಅಲ್ಲಿಯೇ ಕುಳಿತರು. ಅಲ್ಲದೆ ಅಲ್ಲಿಯೇ ಕುಸಿದರು. ತಕ್ಷಣ ಸಹಪಾಠಿಗಳು ನೀರು ಕುಡಿಸಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ವಸಂತ್ ಅಲ್ಲಿಯೇ ಕೊನೆಯುಸಿರೆಳೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೋಮವಾರ ಮೇಘಾಲಯ ವಿಧಾನಸಭಾ ಚುನಾವಣೆ: ಸಿದ್ಧತೆ ಮಾಡಿಕೊಂಡ ಚುನಾವಣಾ ಆಯೋಗ

Sun Feb 26 , 2023
ಶಿಲ್ಲಾಂಗ್, ಫೆಬ್ರವರಿ. 26: ಸೋಮವಾರದ ಫೆಬ್ರವರಿ. 27 ರಂದು ವಿಧಾನಸಭಾ ಚುನಾವಣೆಗೆ ಮೇಘಾಲಯ ಸಿದ್ಧವಾಗಿದ್ದು, ರಾಜ್ಯದಾದ್ಯಂತ 900 ಮತಗಟ್ಟೆಗಳನ್ನು ದುರ್ಬಲ ಮತ್ತು ಗಂಭೀರ ಎಂದು ಗುರುತಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಹೇಳಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮೇಘಾಲಯದ ಸಿಇಒ ಎಫ್‌ಆರ್ ಖಾರ್ಕೊಂಗೊರ್, “ಈ 900 ಮತಗಟ್ಟೆಗಳಲ್ಲಿ ಈ ಹಿಂದೆ ಹಿಂಸಾಚಾರ ನಡೆದಿರುವ ದಾಖಲೆಗಳಿವೆ ಎಂದಿದ್ದಾರೆ. ಗರೋ ಮತ್ತು ಖಾಸಿ ಹಿಲ್ಸ್ ಪ್ರದೇಶದಲ್ಲಿ ಈ ಹಿಂದೆ ಉಗ್ರಗಾಮಿ […]

Advertisement

Wordpress Social Share Plugin powered by Ultimatelysocial