ಆಧುನಿಕ ಭಗೀರಥ ಮಂಡ್ಯ ಕಾಮೇಗೌಡರ ಬಯಕೆ

ಆಧುನಿಕ ಭಗೀರಥ ಕಾಮೇಗೌಡರಿಗೆ ಈಗ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಸಕ್ಕರೆ ನಾಡು ಮಂಡ್ಯದ ಈ ಇಳಿವಯಸ್ಸಿನ ಅಜ್ಜ ಈಗ ಸುದ್ದಿಯ ಕೇಂದ್ರಬಿಂದು. ಅದಕ್ಕೆ ಕಾರಣ ಮೊನ್ನೆ ಭಾನುವಾರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಹೆಸರು ಮತ್ತು ಸಾಧನೆಗಳನ್ನು ಪ್ರಸ್ತಾಪಿಸಿದ್ದು. ಇದಾದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊ ಕರೆ ಮಾಡಿ ಮಾತನಾಡಿಸಿದ್ದು. ಆದರೆ ಈ ಬಡ ಕಾಮೇಗೌಡರಿಗೆ ಯಾವುದರ ಆಕಾಂಕ್ಷೆಯೇ ಇಲ್ಲ, ಅವರಿಗೆ ಬೇಕಾಗಿದ್ದು ಒಂದು ಉಚಿತ ಬಸ್ ಪಾಸ್. ಬಸ್ ಪಾಸ್ ಸಿಕ್ಕಿದರೆ ಅಕ್ಕಪಕ್ಕ ಜಿಲ್ಲೆಗಳ ದೇವಸ್ಥಾನಕ್ಕೆ ಹೋಗಿಬರಬಹುದು ಎಂಬ ಮುಗ್ಧ ಆಲೋಚನೆ ಕಾಮೇಗೌಡರದ್ದು.

Please follow and like us:

Leave a Reply

Your email address will not be published. Required fields are marked *

Next Post

ಮುಖ ಮುಟಿಕೊಳ್ಳಲು ಬಿಡಲ್ಲ ಈ ವಾಚ್..!

Thu Jul 2 , 2020
ಸೋಂಕು ಕಾಣಿಸಿಕೊಂಡಾಗಿನಿAದ ಎಲ್ಲರಿಂದಲೂ ಒಂದೇ ಸಲಹೆ, ಎಚ್ಚರಿಕೆ ಮಾತು, ‘ಮುಖ ಮುಟ್ಟಿಕೊಳ್ಳಬೇಡ’. ಅದನ್ನು ನೆನಪಿಸಿಕೊಳ್ಳುವುದು ಕಷ್ಟದ ಕೆಲಸವಲ್ಲ. ಒಂದು ವಾಚ್ ಅನ್ನು ಕೈಗೆ ಕಟ್ಟಿಕೊಂಡರೆ ಮುಗಿಯಿತು. ನಿಮ್ಮ ಕೈ ಮುಖದ ಬಳಿ ಹೋದೊಡನೆ, ಸದ್ದು ಮಾಡಿ ಎಚ್ಚರಿಸುತ್ತದೆ. ಇಂಗ್ಲೆAಡ್‌ನ ಬ್ರಿಸ್ಟಾಲ್ ನಗರದ ೧೫ ವರ್ಷದ ಬಾಲಕ ಮ್ಯಾಕ್ಸ್ ಮೆಲಿಯಾ, ಬಹುದಿನಗಳ ಪರಿಶ್ರಮದ ಬಳಿಕ ಒಂದು ಸ್ಮಾರ್ಟ್ ಕೈಗಡಿಯಾರವನ್ನು ಅಭಿವೃದ್ಧಿಪಡಿಸಿದ್ದಾನೆ. ಆ ಗಡಿಯಾರ ಎಷ್ಟು ಸ್ಮಾರ್ಟ್ ಎಂದರೆ, ನೀವು ನಿಮಗೆ ಅರಿವಿಲ್ಲದೆಯೇ […]

Advertisement

Wordpress Social Share Plugin powered by Ultimatelysocial