ಆರೋಗ್ಯವೆಂದು ತಾಮ್ರದ ಪಾತ್ರೆಗಳನ್ನು ಬಳಸುತ್ತೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿಷ್ಠ ಎಂಟು ಗಂಟೆಗಳ ಕಾಲ ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅನೇಕರಿಗೆ ಇದರ ಅರಿವಿದೆ. ನೀರನ್ನು ಸಂಗ್ರಹಿಸಲು ತಾಮ್ರದ ಪಾತ್ರೆಗಳು, ಮಡಕೆಗಳು ಮತ್ತು ಗಾಜಿನ ಪಾತ್ರೆಗಳನ್ನು ಸಹ ಬಳಸಲಾಗುತ್ತದೆ.

ಕೆಲವರು ತಾಮ್ರದ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸುತ್ತಾರೆ. ತಪ್ಪೇನಿಲ್ಲ ಆದರೆ, ಕೆಲ ಆಹಾರ ಪದಾರ್ಥಗಳನ್ನು ತಾಮ್ರದ ಪಾತ್ರೆಗಳಲ್ಲಿ ತಿನ್ನುವುದು, ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ತಾಮ್ರದ ಪಾತ್ರೆಯಲ್ಲಿ ನಿಂಬೆ ಅಥವಾ ನಿಂಬೆಯಿಂದ ಮಾಡಿದ ಯಾವುದನ್ನಾದರೂ ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಸಹಜವಾಗಿ, ನಿಂಬೆ ಆಮ್ಲವನ್ನು ಹೊಂದಿರುತ್ತದೆ. ಇದು ತಾಮ್ರದೊಂದಿಗೆ ಸೇರಿಕೊಂಡು ವಿಷವಾಗುವ ಸಾಧ್ಯತೆ ಇದೆ.

ಮೊಸರು ಅಥವಾ ಮೊಸರಿನಿಂದ ಮಾಡಿದ ಯಾವುದನ್ನಾದರೂ ತಾಮ್ರದ ಪಾತ್ರೆಯಲ್ಲಿ ತಿನ್ನಬಾರದು. ಇದರಿಂದ ನಿಮಗೆ ಆಹಾರ ವಿಷ, ವಾಕರಿಕೆ, ಸಮಸ್ಯೆಗಳು ಎದುರಾಗುತ್ತವೆ.

ತಾಮ್ರದ ಪಾತ್ರೆಗಳಲ್ಲಿ ವಿನೆಗರ್ ಬಳಕೆಯನ್ನು ಸಹ ತಪ್ಪಿಸಬೇಕು. ಏಕೆಂದರೆ ವಿನೆಗರ್ ಆಮ್ಲೀಯ ವಸ್ತುವಾಗಿದೆ. ತಾಮ್ರದ ಪಾತ್ರೆಯಲ್ಲಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.

ಉಪ್ಪಿನಕಾಯಿಯನ್ನು ತಾಮ್ರದ ಪಾತ್ರೆಯಲ್ಲಿ ಇಟ್ಟು ತಿನ್ನುವ ತಪ್ಪು ಮಾಡಬೇಡಿ. ಉಪ್ಪಿನಕಾಯಿಯಲ್ಲಿರುವ ಹುಳಿ ತಾಮ್ರದಲ್ಲಿ ಇರಿಸಿದರೆ ವಿಷಕಾರಿ ರೂಪವನ್ನು ಪಡೆಯುತ್ತದೆ

ತಾಮ್ರದ ಲೋಟ ಅಥವಾ ಬಟ್ಟಲಿನಲ್ಲಿ ಮಜ್ಜಿಗೆಯನ್ನು ಕುಡಿಯುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಹಾನಿಕಾರಕ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಜಯ್ ದತ್, ರವಿಚಂದ್ರನ್ ಬಳಿಕ ಧ್ರುವ ಸರ್ಜಾ 'ಕೆಡಿ' ಸೆಟ್‌ಗೆ ಬಾಲಿವುಡ್‌ 'ಸ್ಟಾರ್' ನಟಿ ಎಂಟ್ರಿ!.

Tue Feb 28 , 2023
    ‘ಜೋಗಿ’ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಟೀಸರ್‌ ಈಗಾಗಲೇ ವೈರಲ್‌ ಆಗಿದ್ದು, ಈಗಾಗಲೇ ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಸಂಜಯ್ ದತ್‌ ನಟಿಸುತ್ತಿದ್ದಾರೆ. ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಕೂಡ ಅಣ್ಣಯ್ಯಪ್ಪ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈಗ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕೂಡ ಈ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಟಾಕ್ ಜೋರಾಗಿ ಕೇಳಿಬಂದಿದೆ.1998ರಲ್ಲಿ ತೆರೆಕಂಡ ‘ಪ್ರಿತ್ಸೋದ್‌ ತಪ್ಪಾ’ ಸಿನಿಮಾದ ಮೂಲಕ […]

Advertisement

Wordpress Social Share Plugin powered by Ultimatelysocial