‘ಏನೇ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ’

ಬೆಳಗಾವಿ: ಏನೇ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.ಅವರು ಗೋಕಾಕ್ ತಾಲೂಕಿನ ಕೊನ್ನುರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

 “ನಾನು 6 ಬಾರಿ ಶಾಸಕನಾಗಿ ಈಗ 7 ನೆ ಬಾರಿ ಶಾಸಕನಾಗಿದ್ದೇನೆ.8 ನೆ ಬಾರಿ ಶಾಸಕನಾಗುವ ನಿರ್ಧಾರ ನಿಮ್ಮ ಮೇಲೆ ಬಿಟ್ಟಿದ್ದೇನೆ.ಮುಂದಿನ ಬಾರಿ ಶಾಸಕನಾದ ಮೇಲೆ ರಾಜಕೀಯದಿಂದ ನಿವೃತ್ತಿ ಆಗಬೇಕೆಂದಿದ್ದೇನೆ.ಆದರೆ ಇದೆ ಬಾರಿ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಆದರೆ ಆ ಮಹಾನಾಯಕನಿಗೆ ಚಾಲೆಂಜ ಮಾಡಲಿಕ್ಕೆ ನಾನು ಚುನಾವಣೆ ನಿಲ್ಲುತಿದ್ದೇನೆ.ಅವನನ್ನು ಮೂಲೆಗೆ ಹಚ್ಚುವ ಸಲುವಾಗಿ ಚುನಾವಣೆ ನಿಲ್ಲುತಿದ್ದೇನೆ. ನನ್ನ ಮೇಲೆ ಷಡ್ಯಂತ್ರ ಮಾಡಿ ಒಂದು ಶಂಡನಂತೆ ರಾಜಕೀಯ ಮಾಡಿದ್ದಾನೆ.ಅವನನ್ನು ಪೂರ್ಣ ಪ್ರಮಾಣ ಮನೆಗೆ ಹಚ್ಚುವ ತನಕ ರಾಜಕೀಯದಿಂದ ನಿವೃತ್ತಿ ಆಗೊದಿಲ್ಲ.ಎನೆ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ ಎಂದು ಶಾಸಕ ರಮೇಶ ಜಾರಕಿಹೋಳಿ ಶಪಥಮಾಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತ್ ಜೋಡೋಗೆ ನಾಳೆ ತೆರೆ.

Mon Jan 30 , 2023
ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ಸುಮಾರು ೫ ತಿಂಗಳ ಸುದೀರ್ಘ ಅವಧಿಯಲ್ಲಿ ೧೨ ರಾಜ್ಯಗಳ ಮೂಲಕ ೪ ಸಾವಿರ ಕಿ.ಮೀ ಪಾದಯಾತ್ರೆ ಸಾಗಿ ಜಮ್ಮು ಕಾಶ್ಮೀರ ತಲುಪಿದ್ದು ಹೊಸ ದಾಖಲೆ ಬರೆದಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ೪ ಸಾವಿರ ಕಿ.ಮೀ ಪೂರೈಸಿರುವ ಹಿನ್ನೆಲೆಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಹುಲ್ ಗಾಂಧಿ ಧ್ವಜಾರೋಹಣ ಮಾಡಲಿದ್ದು ನಾಳೆ ಯಾತ್ರೆ ಅಧಿಕೃತವಾಗಿ ಸಂಪನ್ನವಾಗಲಿದೆ. ನಾಳೆ ಜಮ್ಮು […]

Advertisement

Wordpress Social Share Plugin powered by Ultimatelysocial