ಉತ್ತರಾಖಂಡ, ಹಿಮಾಚಲಕ್ಕೂ ವ್ಯಾಪಿಸಿದ ಡ್ರ‍್ಯಾಗನ್

ಗಲ್ವಾನ್ ಕಣಿವೆಯ ರಕ್ತ ಸಿಕ್ತ ಘರ್ಷಣೆಯಲ್ಲಿ ಸಾಕಷ್ಟು ಹಾನಿ ಅನುಭವಿಸಿರುವುದಲ್ಲದೆ, ಜಾಗತಿಕವಾಗಿ ಏಕಾಂಗಿಯಾಗುವ ಭೀತಿ ಇದ್ದರೂ ಚೀನಾ ಸುಮ್ಮನಾಗುತ್ತಿಲ್ಲ. ಲಡಾಖ್ ಪೂರ್ವಭಾಗದ ನಾಲ್ಕು ಕಡೆಗಳಲ್ಲಿ ಸೇನೆಯನ್ನು ನಿಯೋಜಿ ಸಿರುವ ಅದು, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ಹೊಂದಿಕೊAಡ ಗಡಿಗಳಲ್ಲೂ ತನ್ನ ಸೇನೆಯನ್ನು ನಿಯೋಜಿ ಸಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೀಢೀರ್ ಲೇಹ್ ಭೇಟಿಯ ನಂತರದಲ್ಲಿ ಈ ವಿದ್ಯಮಾನ ಕಂಡು ಬಂದಿದೆ.ಅಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾಪಡೆ, ವಾಯುಪಡೆ ಮತ್ತು ಐಟಿಬಿಪಿ ಯೋಧರೊಂದಿಗೆ ಮಾತುಕತೆ ನಡೆಸಿ, ಧೈರ್ಯ, ಸಾಹಸ ಮತ್ತು ಶೌರ್ಯವನ್ನು ಕೊಂಡಾಡಿದ್ದರು. ಇದು ಚೀನಾಕ್ಕೆ ಇರಿಸುಮುರಿಸು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಖಾತೆ ವಕ್ತಾರರು, ಚೀನಾವನ್ನು ಕೆರಳಿಸುವಂತ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಭಾರತವನ್ನು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಈಗ ಡ್ರ‍್ಯಾಗನ್ ತನ್ನ ಕಬಂಧಬಾಹುವನ್ನು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದತ್ತ ಚಾಚುವ ದುಸ್ಸಾಹಸ ತೋರಿದೆ.

Please follow and like us:

Leave a Reply

Your email address will not be published. Required fields are marked *

Next Post

HCQ ಮೇಲಿನ ಪ್ರಯೋಗ ಬಿಟ್ಟ ವಿಶ್ವ ಅರೋಗ್ಯ ಸಂಸ್ಥೆ

Sun Jul 5 , 2020
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೋನಾ ವೈರಸ್ ಗೆ ಔಷಧಿಯಾಗಬಲ್ಲದು ಎಂದು ಹೇಳಿದ್ದರು. ಆದರೆ ಆ ಬಳಿಕ ಕೊರೋನಾ ವೈರಸ್ ಸಾವುಗಳ ಪ್ರಮಾಣ ಕಡಿಮೆ ಮಾಡುವಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಷ್ಪ್ರಯೋಜಕ ಎಂದು ವಿಜ್ಞಾನಿಗಳು ಹೇಳಿದ್ದರು. ಹೀಗಾಗಿ ಅಮೆರಿಕ ವಿಜ್ಞಾನಿಗಳು ಇದರ ಮೇಲಿನ ಪ್ರಯೋಗವನ್ನು ಕೈ ಬಿಟ್ಟಿದ್ದರು.ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೂಡ ಊಅಕಿ ಮೇಲಿನ ಪ್ರಯೋಗವನ್ನು ಕೈ ಬಿಟ್ಟಿದೆ. HCQ ಮಾತ್ರವಲ್ಲದೇ lopinavir/ritonavir   ಔಷಧಿ ಮೇಲಿನ ಪ್ರಯೋಗವನ್ನೂ […]

Advertisement

Wordpress Social Share Plugin powered by Ultimatelysocial