ಆ.೫ ರಂದು ನಡೆಯಲಿರುವ ಅಯೋಧ್ಯೆ ರಾಮ ಮಂದಿರ ಭೂಮಿಪೂಜೆಗೆ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟçದ ಸಿಎಂ ಉದ್ಧವ್ ಠಾಕ್ರೆ ಅವರನ್ನು ಆಹ್ವಾನಿಸಿಲ್ಲ ಎಂದು ವಿಶ್ವ ಹಿಂದು ಪರಿಶತ್ ಸ್ಪಷ್ಟಪಡಿಸಿದೆ. ‘ಭೂಮಿಪೂಜೆಗೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನೂ ಆಹ್ವಾನಿಸುತ್ತಿಲ್ಲ. ಪ್ರೊಟೊಕಾಲ್ ಅನ್ವಯ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮಾತ್ರವೇ ಪಾಲ್ಗೊಳ್ಳಲಿದ್ದಾರೆ. ಹಾಗೆ ಈ ಕೊರೊನಾ ಮಹಾಮಾರಿಯಿಂದಾಗಿ ಹೆಚ್ಚು ಜನರ ಉಪಸ್ಥಿತಿ ಈ ಸಂಧರ್ಭದಲ್ಲಿ ಒಳಿತಲ್ಲ ಆದ್ದರಿಂದ ಯಾವ ರಾಜ್ಯದ ಸಿಎಂ ಅವರನ್ನೂ ಆಹ್ವಾನಿಸಿಲ್ಲ. ಉದ್ಧವ್ ಅಧಿಕಾರದ ಆಸೆಗಾಗಿ ಹಿಂದುತ್ವ ಬಿಟ್ಟುಕೊಟ್ಟವರು. ಮಿಗಿಲಾಗಿ ರಾಮಮಂದಿರ ಚಳವಳಿ ಶಿವಸೇನೆಗೆ ಸಂಬAಧಿಸಿದ್ದೂ ಅಲ್ಲ’ ಎಂದು ವಿಶ್ವ ಹಿಂದು ಪರಿಶತ್ ಕಾರ್ಯಕಾರಿ ಅಧ್ಯಕ್ಷ ಆಲೋಕ್ ಕುಮಾರ್ ತಿಳಿಸಿದ್ದಾರೆ.
ಸ್ಲಗ್:
ಉದ್ಧವ್ಗೆ ಯಾವುದೇ ಆಹ್ವಾನವಿಲ್ಲ
Please follow and like us: