ರೈತರು ಬೆಳೆಯುವ ಬೆಳೆಗಳಲ್ಲಿ ಒಮ್ಮೊಮ್ಮೆ ನಷ್ಠವುಂಟಾಗಬಹುದು, ಆದರೆ ಹಾಲು ಉತ್ಪಾದಕರಿಗೆ ಡೇರಿ ಸದಾ ಶ್ರೀರಕ್ಷೆಯಾಗಿ ಬದುಕು ಮುನ್ನಡೆಸುತ್ತಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ನರ್ದೇಶಕ ಕೊಂಡವಾಡಿ ಚಂದ್ರಶೇಖರ್ ಹೇಳಿದ್ದಾರೆ. ಹಾಲು ಉತ್ಪಾದಕರಿಗೆ ಕ್ಯಾನ್ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಕೊರೊನಾ ಇಂದು ಪ್ರಪಂಚದಲ್ಲೇ ಹಲವು ಉದ್ಯಮ ಮತ್ತು ವಿವಿಧ ಕೆಲಸ ಕರ್ಯಗಳು ಸ್ಥಗಿತಗೊಳ್ಳುವಂತೆ ಮಾಡಿರುವುದರಿಂದ ವಿವಿಧ ಬಗೆಯ ಜನರು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಕಠಿಣ ಸ್ಥಿತಿಯಲ್ಲೂ ಕೂಡ ಹಾಲು ಉತ್ಪಾದನೆಯಿಂದ ಹಲವು ಕುಟುಂಬಗಳು ನೆಮ್ಮದಿಯಿಂದ ಬದುಕುವಂತಾಗಿದೆ. ಕೊರೊನಾ ಆರೋಗ್ಯವಂತರನ್ನ ಕಾಡದಿದ್ದರೂ ರೋಗವಿರುವವರ ಪ್ರಾಣಕ್ಕೆ ಕುತ್ತು ತರುವ ಅಪಾಯ ಇರುವುದರಿಂದ ಪ್ರತಿಯೊಬ್ಬರೂ ಕೂಡ ಕೊರೊನಾ ತಡೆಯಲು ಮಾಸ್ಕ್ ದೈಹಿಕ ಅಂತರ ಮತ್ತು ಸ್ವಚ್ಚತೆ ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಹಾಲು ಉತ್ಪಾದನೆಯಿಂದ ಹಲವರಿಗೆ ನೆಮ್ಮದಿ
Please follow and like us: