ಕೋಲಾರ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯವರು ಟೊಮ್ಯಾಟೋ ತಾಜ್ಯವನ್ನು ರಾತ್ರಿ ವೇಳೆ ಜನರ ಕಣ್ಣುತಪ್ಪಿಸಿ ಪ್ರಮುಖ ರಸ್ತೆಗಳ ಅಕ್ಕ-ಪಕ್ಕದಲ್ಲಿ ಸುರಿದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾರೆ. ನಗರದಲ್ಲಿ ಸಾಕ್ರಾಮಿಕ ರೋಗಗಳು ಮಿತಿ ಮಿರುತ್ತಿದ್ದು, ಅಧಿಕಾರಿಗಳು ತಮ್ಮ ಕುರ್ಚಿಗಳಿಗಷ್ಟೇ ಸೀಮಿತವಾಗಿದ್ದಾರೆ ಎಂದು ಯುವ ಮುಖಂಡ ಚಂದ್ರಮೌಳಿ ಅವರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ 1000 ಸಂಖ್ಯೆ ಹಂಚಿಗೆ ಬಂದಿದ್ದು, ತಮಗೆ ತಿಳಿಯೇ ಇಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಅಂತ.
ಇಲ್ಲಿ ನಗರಸಭೆಯಿಂದ ದಂಡ ವಿಡಿಸಲಾಗುವುದು ಅಂತ ಬೋರ್ಡ್ ಹಾಕಿದ್ದಾರೆ ಅಷ್ಟೇ, ಆದರೆ ಕಸ ಹಾಕಿದವರಿಗೆ ಇದುವರೆಗೂ ದಂಡ ಮಾತ್ರ ವಿದಿಸಿಲ್ಲ. ಸಾರ್ವಜನಿಕರ ಹಿತ ಕಾಪಾಡುವುದು ಈ ವಾರ್ಡಿನ ಸದಸ್ಯನಿಗೆ ಪರಿಜ್ಞಾನ ಇರಬೇಕು, ಎಪಿಎಂಸಿ ಅವರು ಸಹ ತಮಗೆ ಪರಿವೇ ಇಲ್ಲದಂತೆ ಇಂತಹ ಅಜ್ಞಾನ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.