ಏಕಾಏಕಿ ಹಾಲಿನ ದರ ಕಡಿಮೆ ರೈತರು ಕಂಗಾಲಾ

ಮಹಾಮಾರಿ ಕೊರೊನಾ ವಕ್ಕರಿಸಿದಾಗಿನಿಂದ ದೇಶದಲ್ಲಿ ಅಲವು ಉದ್ಯಮಗಳಿಗೆ ದೊಡ್ಡ ಆರ್ಥಿಕ ಹೊಡೆತಗಳು ಬಿದ್ದಿವೆ, ಅದರಲ್ಲೂ ಕೋಲಾರ ರೈತರ ಜೀವನಾದಾರಿತ ಆಗಿದ್ದ ಹೈನೋದ್ಯಮಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಸಿಲ್ಕ್ & ಮಿಲ್ಕ್ ಗೆ ಹೆಸರುವಾಸಿಯಾಗಿರುವ ಇಡೀ ದೇಶಕ್ಕೆ ಹಾಲು ಉತ್ಪಾದಿಸಿ ಕಳುಹಿಸುತ್ತಿದ್ದ, ಕೋಲಾರ ಜಿಲ್ಲೆಯ ರೈತರು ಈಗ ಹಾಲಿನ ದರ ಏಕಾಏಕಿ ಕಡಿಮೆ ಮಾಡಿರುವುದರಿಂದ ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಈಗ ಹಾಲು ಉತ್ಪಾದನೆ ಕೂಡ ಹೆಚ್ಚಾಗಿದ್ದು, ಕೊರೊನಾ ದಿಂದ ಹಾಲು ಮಾರಾಟವಿಲ್ಲದೆ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ದೊಡ್ಡ ನಷ್ಟವಾಗಿದೆ, ಇದನ್ನ ಸರಿದೂಗಿಸಲು ಕೆಎಂಎಫ್ ಸಂಸ್ಥೆ ಇನ್ನಿಲ್ಲದ ಕಸರತ್ತು ನಡೆಸಿ, ಈಗಾಗಲೇ ಆರ್ಥಿಕ ಸಂಕಷ್ಟ ಎದರಿಸುತ್ತಿರುವ ರೈತರ ಮೇಲೆ ಬರೇ ಎಳೆದಿದೆ. ಕಳೆದ ಒಂದೇ ತಿಂಗಳಲ್ಲಿ ಕೆಎಂಎಫ್ ಸಂಸ್ಥೆ ಒಂದು ಲೀಟರ್ ಗೆ 2 ರೂ. ಗಳಂತೆ, ಒಟ್ಟು 4 ರೂಪಾಯಿಗಳನ್ನು ಕಡಿಮೆ ಮಾಡಿದೆ. ಇದರಿಂದ ಹೈನುಗಾರಿಕೆಯನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ರೈತರು ಈಗ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ

Mon Jul 27 , 2020
ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸವನ್ನು ಮೆರೆಯುತ್ತಿದೆ. ನಿಪ್ಪಾಣಿ ನಗರದ ಬಡ್ಡೆಗಲ್ಲಿಯ 52 ವರ್ಷದ ನಿವಾಸಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ನಿಪ್ಪಾಣಿ ನಗರದ ಮಹಾತ್ಮಗಾಂಧಿ  ಆಸ್ಪತ್ರೆ ಯಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಸೋಂಕಿತನನ್ನು  ಬೆಳಗಾವಿಗೆ ರವಾನೆ ಮಾಡುತ್ತಿದ್ದಾರೆ. ಹಾಗೂ ಈತನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದ್ದು ಈತನ ಸಂಪರ್ಕ ಕ್ಕೆ ಬಂದಿರುವ ಸುಮಾರು 100 ಅಧಿಕ ಜನರನ್ನು ಹೋಮ್ ಕ್ವಾರೈಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. Please […]

Advertisement

Wordpress Social Share Plugin powered by Ultimatelysocial