ಮಹಾಮಾರಿ ಕೊರೊನಾ ವಕ್ಕರಿಸಿದಾಗಿನಿಂದ ದೇಶದಲ್ಲಿ ಅಲವು ಉದ್ಯಮಗಳಿಗೆ ದೊಡ್ಡ ಆರ್ಥಿಕ ಹೊಡೆತಗಳು ಬಿದ್ದಿವೆ, ಅದರಲ್ಲೂ ಕೋಲಾರ ರೈತರ ಜೀವನಾದಾರಿತ ಆಗಿದ್ದ ಹೈನೋದ್ಯಮಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಸಿಲ್ಕ್ & ಮಿಲ್ಕ್ ಗೆ ಹೆಸರುವಾಸಿಯಾಗಿರುವ ಇಡೀ ದೇಶಕ್ಕೆ ಹಾಲು ಉತ್ಪಾದಿಸಿ ಕಳುಹಿಸುತ್ತಿದ್ದ, ಕೋಲಾರ ಜಿಲ್ಲೆಯ ರೈತರು ಈಗ ಹಾಲಿನ ದರ ಏಕಾಏಕಿ ಕಡಿಮೆ ಮಾಡಿರುವುದರಿಂದ ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಈಗ ಹಾಲು ಉತ್ಪಾದನೆ ಕೂಡ ಹೆಚ್ಚಾಗಿದ್ದು, ಕೊರೊನಾ ದಿಂದ ಹಾಲು ಮಾರಾಟವಿಲ್ಲದೆ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ದೊಡ್ಡ ನಷ್ಟವಾಗಿದೆ, ಇದನ್ನ ಸರಿದೂಗಿಸಲು ಕೆಎಂಎಫ್ ಸಂಸ್ಥೆ ಇನ್ನಿಲ್ಲದ ಕಸರತ್ತು ನಡೆಸಿ, ಈಗಾಗಲೇ ಆರ್ಥಿಕ ಸಂಕಷ್ಟ ಎದರಿಸುತ್ತಿರುವ ರೈತರ ಮೇಲೆ ಬರೇ ಎಳೆದಿದೆ. ಕಳೆದ ಒಂದೇ ತಿಂಗಳಲ್ಲಿ ಕೆಎಂಎಫ್ ಸಂಸ್ಥೆ ಒಂದು ಲೀಟರ್ ಗೆ 2 ರೂ. ಗಳಂತೆ, ಒಟ್ಟು 4 ರೂಪಾಯಿಗಳನ್ನು ಕಡಿಮೆ ಮಾಡಿದೆ. ಇದರಿಂದ ಹೈನುಗಾರಿಕೆಯನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ರೈತರು ಈಗ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.