ಕಾಂಗ್ರೆಸ್​​ ಸದಸ್ಯೆಯ ಜಾತಿ ಪ್ರಮಾಣ ಪತ್ರ ರದ್ದು-  ಮಾಜಿ ಶಾಸಕ ನಾಡಗೌಡ ಆರೋಪ

ಕಾಂಗ್ರೆಸ್ ಪಕ್ಷದ ಸದಸ್ಯೆ ಲತಾ ಗೂಳಿ ಅವರಿಗೆ ಕೊಟ್ಟ ಜಾತಿ ಪ್ರಮಾಣ ಪತ್ರವನ್ನು ರಾತ್ರೋರಾತ್ರಿ ರದ್ದುಗೊಳಿಸುವ ಮೂಲಕ ಸರ್ಕಾರಿ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಆರೋಪಿಸಿದ್ದಾರೆ. ಮುದ್ದೇಬಿಹಾಳನಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಯಾರದ್ದೋ  ಕೈಗೊಂಬೆಯಾಗಿ ಕೆಲಸ ಮಾಡುವುದಲ್ಲ. ತಾಲೂಕು ಮ್ಯಾಜಿಸ್ಟ್ರೇಟ್​ಗಳು ಈ ರೀತಿ ಕೆಲಸ ಮಾಡಿದರೆ ಸಾಮಾನ್ಯ ಜನರಿಗೆ ಇವರ ಮೇಲೆ ಯಾವ ನಂಬಿಕೆ ಉಳಿಯಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್​​ ಪಕ್ಷದ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇವೆ . ಒಂದು ವೇಳೆ ಇದೇ ಪ್ರವೃತ್ತಿ ಮುಂದುವರೆದರೆ ಪಕ್ಷ ಉಗ್ರ ಹೋರಾಟ ನಡೆಸುತ್ತದೆ. ಸಂಖ್ಯಾಬಲ ಇಲ್ಲದ ಕಾರಣ ರಾಜಕೀಯ ತಂತ್ರಗಳನ್ನು ಮಾಡುತ್ತಿದ್ದಾರೆ  ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಮುದ್ದೇಬಿಹಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚುನಾವಣೆ/ ಚುನಾವಣೆ-ಕೋರಂ ಕೊರತೆ ಹಿನ್ನೆಲೆ ಸಭೆ ಮುಂದೂಡಿಕೆ

Fri Jul 24 , 2020
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾ ಪಂಚಾಯಿತಿ ಅಧ್ಯಕ್ಷ ಚುನಾವಣೆ ಜಿದ್ದಾ ಜಿದ್ದಿಯ ಕಣವಾಗಿ ಮಾರ್ಪಟ್ಟಿತ್ತು. ಆದ್ರೆ ಇದೀಗ ಚುನಾವಣೆ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿದೆ. ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಾದ ಸೋಮಲಿಂಗೆ ಗೆಣ್ಣೂರ ಅಧಿಕೃತ ಹೇಳಿಕೆ. ಹೊಸ ಚರ್ಚೆಗೆ ನಾಂದಿ ಹಾಡಿದ ಕಾಂಗ್ರೆಸ್  ತಾಪಂ ಸದಸ್ಯೆ ಲತಾ ಮುತ್ತಿನಶೆಟ್ಟಿ ಗೂಳಿ ಅವರ ಜಾತಿ ಪ್ರಮಾಣ ಪತ್ರ ರದ್ದು ಆದೇಶ ಮುಂದಿನ ದಿನವರಿಗೆ ಚುನಾವಣೆ ಮುಂದುಡಿಕೆಯಾಗಿದೆ. Please follow and like […]

Advertisement

Wordpress Social Share Plugin powered by Ultimatelysocial