ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಮುಂದಿಟ್ಟುಕೊAಡು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಸ್ನ ಮುಂಭಾಗದಲ್ಲಿ ಕೆಮರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಅಪಘಾತದ ಸಮಯದಲ್ಲಿ ವಾಸ್ತವತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ಕೆಮರಾ ಸಹಕಾರಿಯಾಗಲಿದೆ. ಕೆಲವೊಮ್ಮೆ ಬಸ್ ಚಾಲಕನ ತಪ್ಪಿಲ್ಲದಿದ್ದರೂ ಅವರೇ ಹೊಣೆಗಾರರಾಗುವ ಸಾಧ್ಯತೆಯಿದೆ. ಇದನ್ನು ತಪ್ಪಿಸಲು ನೈಜ ಘಟನೆ ತಿಳಿಯುವ ನಿಟ್ಟಿನಲ್ಲಿ ಕೆಮರಾ ಸಹಕಾರಿಯಾಗಲಿದೆ. ಈ ಸಂಬAಧ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಪ್ರಧಾನ ಕಚೇರಿಯ ಕೆಲವು ಬಸ್ಗಳಿಗೆ ಅಳವಡಿಸಲಾಗುತ್ತದೆ. ಬಳಿಕ ವಿಭಾಗ ಮಟ್ಟದಲ್ಲಿ ಅಳವಡಿಸಲಾಗುವುದು. ಚಾಲಕನ ಸೀಟಿನ ಬಳಿಯಲ್ಲಿ ಇರುವ ಸಣ್ಣ ಕನ್ನಡಿಯೂ ಅಪಘಾತಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಆ ಕನ್ನಡಿ ಯನ್ನು ಬದಲಾಯಿಸಲಾಗಿದೆ.
ಕೆ.ಎಸ್.ಆರ್.ಟಿ.ಸಿ.ಯಿಂದ ಅಪಘಾತ ವಾಸ್ತವತೆ ಪತ್ತೆಗೆ ಕ್ರಮ
Please follow and like us: