ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

ದಿನದಿಂದ ದಿನಕ್ಕೆ ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ತೈಲ ಬೆಲೆ ಏರಿಕೆಯಿಂದ ರೈತರು,ಬಡವರಿಗೂ ತೊಂದರೆಯಾಗುತ್ತಿದೆ. ಇಂತಹ ಬೆಲೆಏರಿಕೆಯನ್ನ ನಾವು ಊಹಿಸಿರಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಬ್ಯಾರಲ್ ಗೆ ೧೩೦ ಡಾಲರ್ ಇತ್ತು ವಿಶ್ವಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್  ಬೆಲೆಯಿತ್ತು ಆದರೂ ನಾವು ೫೦/೬೦ ಕ್ಕೆ ಲೀಟರ್ ನೀಡುತ್ತಿದ್ದೆವು. ಆದರೆ ಇಂದು ಬ್ಯಾರಲ್ ಗೆ ೩೦ ಡಾಲರ್ ಬೆಲೆಯಿದೆ ಆದರೂ  ಕೇಂದ್ರ ೮೦ ರೂ ಲೀಟರ್ ಏರಿಸಿದೆ. ೨೦ ರೂಗೆ ಸಿಗಬೇಕಾದ ಪೆಟ್ರೋಲ್ ೮೦ ರೂ ಮಾಡಿದ್ದಾರೆ. ಮೋದಿ ಸರ್ಕಾರವು ಜನರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ.  ಹಾಗೆಯೇ ಮೋದಿ ೧೫ ಲಕ್ಷ ಕೋಟಿ ಬೊಕ್ಕಸಕ್ಕೆ ಹಾಕಿಕೊಂಡಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಸಾಮಾನ್ಯರ ಪರ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ನೂತನವಾಗಿ ಲ್ಯಾಬೊರೇಟರಿ ಆರಂಭ

Mon Jun 29 , 2020
ಮೈಸೂರು ಜೆಎಸ್ ಎಸ್ ಆಸ್ಪತ್ರೆ ‌‌ಯಲ್ಲಿ ನೂತನವಾಗಿ ಪ್ರಾರಂಭಿಸಲಿರುವ ಕೋವಿಡ್ ಲ್ಯಾಬೊರೇಟರಿ ಯನ್ನು ಮುಖ್ಯಮಂತ್ರಿ ಗಳು‌ ಆನ್ ಲೈನ್ ಮೂಲಕ  ಉದ್ಘಾಟನೆ ‌ಮಾಡಿದರು. ಇಂದು  ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕುಳಿತು  ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಯಲ್ಲಿ ನೂತನವಾಗಿ ಪ್ರಾರಂಭಿಸಲಿರುವ  ಕೋವಿಡ್-19 ಲ್ಯಾಬೊರೇಟರಿ ಅನ್ನು ಆನ್‍ಲೈನ್ ವಿಡಿಯೋ ಸಂವಾದದ  ಮುಖಾಂತರ ಮುಖ್ಯಮಂತ್ರಿ ಶ್ರೀ ‌ಬಿ.ಎಸ್. ‌ಯಡಿಯೂರಪ್ಪ‌ ಅವರು ಉದ್ಘಾಟನಾ‌ ಮಾಡಿದರು. ಕಾರ್ಯಕ್ರಮವನ್ನು ‌ನೆರವೇರಿಸಿ  ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತಾನಾಡಿದರು   Please follow […]

Advertisement

Wordpress Social Share Plugin powered by Ultimatelysocial