ದಿನದಿಂದ ದಿನಕ್ಕೆ ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ತೈಲ ಬೆಲೆ ಏರಿಕೆಯಿಂದ ರೈತರು,ಬಡವರಿಗೂ ತೊಂದರೆಯಾಗುತ್ತಿದೆ. ಇಂತಹ ಬೆಲೆಏರಿಕೆಯನ್ನ ನಾವು ಊಹಿಸಿರಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಬ್ಯಾರಲ್ ಗೆ ೧೩೦ ಡಾಲರ್ ಇತ್ತು ವಿಶ್ವಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆಯಿತ್ತು ಆದರೂ ನಾವು ೫೦/೬೦ ಕ್ಕೆ ಲೀಟರ್ ನೀಡುತ್ತಿದ್ದೆವು. ಆದರೆ ಇಂದು ಬ್ಯಾರಲ್ ಗೆ ೩೦ ಡಾಲರ್ ಬೆಲೆಯಿದೆ ಆದರೂ ಕೇಂದ್ರ ೮೦ ರೂ ಲೀಟರ್ ಏರಿಸಿದೆ. ೨೦ ರೂಗೆ ಸಿಗಬೇಕಾದ ಪೆಟ್ರೋಲ್ ೮೦ ರೂ ಮಾಡಿದ್ದಾರೆ. ಮೋದಿ ಸರ್ಕಾರವು ಜನರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಹಾಗೆಯೇ ಮೋದಿ ೧೫ ಲಕ್ಷ ಕೋಟಿ ಬೊಕ್ಕಸಕ್ಕೆ ಹಾಕಿಕೊಂಡಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಸಾಮಾನ್ಯರ ಪರ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.