ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿಯ ಹಿಂದೂ ಮಹಾವಿದ್ಯಾಲಯದಲ್ಲಿನ ಕೆಲವು ವಿದ್ಯಾರ್ಥಿನಿಯರು ಸಮವಸ್ತ್ರದ ಬದಲು ಬುರ್ಖಾ ಧರಿಸಿ ಬಂದಿದ್ದರಿಂದ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಅವರಿಗೆ ಗೇಟ್ ಹೊರಗೆ ಬುರ್ಖಾ ತೆಗೆಸಿದ ನಂತರ ಒಳಗೆ ಬಿಡಲಾಯಿತು.
ಈ ಸಮಯದಲ್ಲಿ ಕೆಲವು ವಿದ್ಯಾರ್ಥಿನಿಗಳು ಬುರ್ಖಾದಲ್ಲೇ ತರಗತಿಯ ತನಕ ಹೋಗಲು ಆಗ್ರಹಿಸಿದರು; ಆದರೆ ಅದನ್ನು ನಿರಾಕರಿಸಲಾಯಿತು. ಸಮಾಜವಾದಿ ಪಕ್ಷದ ವಿದ್ಯಾರ್ಥಿ ಸಂಘಟನೆಗೆ ಈ ಮಾಹಿತಿ ದೊರೆಯುತ್ತಲೇ ಅದರ ಕಾರ್ಯಕರ್ತರು ಅಲ್ಲಿಗೆ ತಲುಪಿದರು. ಆಗ ಅವರ ಮತ್ತು ಮಹಾವಿದ್ಯಾಲಯದ ಪ್ರಾಧ್ಯಾಪಕರಲ್ಲಿ ಹೊಡೆದಾಟ ನಡೆದಿರುವ ವಾರ್ತೆ ಇದೆ. ಜನವರಿ ೧ ರಿಂದ ಈ ಮಹಾವಿದ್ಯಾಲಯದಿಂದ ಸಮವಸ್ತ್ರ ಕಡ್ಡಾಯಗೊಳಿಸಲಾಗಿತ್ತು. ಈ ಬಗ್ಗೆ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಸಂಘಟನೆಯಿಂದ ಬುರ್ಖಾ ಕೂಡ ಇದರಲ್ಲಿ ಸೇರಿಸಬೇಕೆಂದು ಆಗ್ರಹಿಸಿತ್ತು.
https://play.google.com/store/apps/details?id=com.speed.newskannada