ಯಾದಗಿರಿ ಜಿಲಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಕೇಸ್ ಹೆಚ್ಚಾಕ್ತಿದ್ದರೂ, ಅಲ್ಲಿನ ಜಜನ ಮುಂಜಾಗೃತಾ ಕ್ರಮಗಳನ್ನ ಅನುಸರಿಸುತ್ತಿಲ್ಲ. ರೈತರು ಪಾಣಿಗಾಗಿ ತಹಸೀಲ್ದಾರ್ ಕಚೇರಿ ಮುಂದೆ ಸಾಲು ಸಾಲಾಗಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ನಡೆದಿದೆ. ರಾಜ್ಯದಲ್ಲಿ ಮಳೆ ಆರಂಭವಾಗಿರುವುದರಿAದ ರೈತರು ಬಿತ್ತನೆ ಕಾರ್ಯವನ್ನ ಪ್ರಾರಂಭಿಸಿದ್ದು, ಪಾಣಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಅಂತರ ಕಾಯ್ದುಕೊಳ್ಳದೇ ಇರೋದು ನಿಜ್ಕಕೂ ಬೇಸರದ ಸಂಗತಿ. ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಹೆಚ್ಚಾಗುತ್ತಿದ್ದರೂ, ಸುರಪುರ ಜನತೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ತಹಸೀಲ್ ಕಾರ್ಯಾಲಯದ ಒಳಗಡೆ ಹೋಗುವ ಮುಂಚೆ ಯಾವುದೇ ಸ್ಯಾನಿಟೈಸರ್ ಇರದೇ ಜನ ಜಮಾಯಿಸಿದ್ದಾರೆ.
ಕೊರೊನಾಕ್ಕೆ ಹೆದರದ ಯಾದಗಿರಿ ಜನತೆ
Please follow and like us: