ಕೊರೊನಾದಿಂದ ತೊಂದರೆಗೀಡಾದ ಜನತೆ

ಕೊರೊನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವ ಸಂಬಂಧ ಬಡವರು ಹಾಗು ನಿರ್ಗತಿಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಂತಹವರಿಗೆ ಸಹಾಯ ಹಸ್ತ ಚಾಚುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ ಎಂದು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಆಟೋ ಚಾಲಕರಿಗೆ ಮತ್ತು ಬಡವರಿಗೆ ಆಹಾರದ ದಿನಸಿ ಕಿಟ್ ಗಳನ್ನು ವಿತರಿಸಿದರು. ನಂತರ  ಮಾತನಾಡಿದ ಅವರು ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸಬೇಕು, ಮನೆಯಿಂದ ಆಚೆ ಹೋಗುವಾಗ ತಪ್ಪದೆ ಮಾಸ್ಕ್ ಧರಿಸಿ ಹಾಗೂ ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳಾದ ಎಂ ಎಲ್ ಗಂಗರಾಜು, ಎಂ ಆರ್ ಜಗನ್ನಾಥ್ ನರಸಿಂಹಮೂರ್ತಿ, ಮುಖಂಡ ತುಂಗೋಟಿ ರಾಮಣ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಪೈಸೆ ಪೈಸೆಗೂ ಕೂಡ ಲೆಕ್ಕ ಕೊಡ್ತೇವೆ

Sat Jul 11 , 2020
ಇದು ಬಿಜೆಪಿ ಸರ್ಕಾರ, ನಾವು ಪೈಸೆ ಪೈಸೆಗೂ ಕೂಡ ಲೆಕ್ಕ ಕೊಟ್ಟೇ ಕೊಡ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಿಂದಿನ ಸರ್ಕಾರದಂತಲ್ಲ. ಪ್ರತಿ ಖರ್ಚಿಗೂ ಎಲ್ಲರೂ ಲೆಕ್ಕ ಕೊಡಲೇಬೇಕು, ವಿಧಾನಸೌಧದಲ್ಲಿ ಚರ್ಚೆ ಆಗಲೇಬೇಕು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಏನಾದ್ರೂ ಲೆಕ್ಕ‌ಕೊಡದ ಗುಂಗಿನಲ್ಲಿ ಇರಬಹುದೇನೋ. ಸಿದ್ದರಾಮಯ್ಯ ಅವರ ಗುಂಗಲ್ಲಿ ಇದ್ರೆ ಅದರಿಂದ ಹೊರಬರಲಿ. ನನ್ನ ಇಲಾಖೆಯಿಂದಲೂ 3೦೦ ಕೋಟಿ […]

Advertisement

Wordpress Social Share Plugin powered by Ultimatelysocial