ಕೋವಿಡ್ನಿಂದ ಜನರನ್ನ ರಕ್ಷಿಸುವ ಕೊರೊನಾ ವಾರಿರ್ಸ್ಗೆ ಶಿವಮೊಗ್ಗದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಜ್ವರ ಎಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದ ಪೊಲೀಸ್ ಅಧಿಕಾರಿಯಬ್ಬರಿಗೆ ಚಿಕಿತ್ಸೆಯನ್ನ ನಿರಾಕರಿಸಿದ ಘಟನೆ ನಡೆದಿದೆ. ಜಿಲ್ಲೆಯ ೪೫ ವರ್ಷದ ಎಎಸ್ಐ ಒಬ್ಬರು ಜ್ವರ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಅವರನ್ನು ಕೋವಿಡ್ ಟೆಸ್ಟ್ ಕಾರಣ ಹೇಳಿ ವಾಪಾಸ್ ಕಳುಹಿಸಲಾಗಿದೆ. ಇದರಿಂದ ಈ ಪೊಲೀಸ್ ಅಧಿಕಾರಿ ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.
ಕೋವಿಡ್ ವಾರಿಯರ್ಸ್ಗೆ ಚಿಕಿತ್ಸೆ ನಕಾರ
Please follow and like us: