ನಾನು ದೆಹಲಿಗೆ ಹೋದಾಗ ಅಲ್ಲಿನ ಸರಕಾರಿ ಶಾಲೆಗಳನ್ನು ನೋಡಿ ತುಂಬಾ ಪ್ರಭಾವಿತನಾಗಿದ್ದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದ್ದಾರೆ. ಬೀದರ್ನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿ ಬಳಿಕ ಮಾತನಾಡಿದ ಅವರು, ಇಲ್ಲಿನ ಇಂಜಿನಿಯರಗಳನ್ನು ಕೂಡ ಒಂದು ಸಲ ದೆಹಲಿಗೆ ಹೋಗಿ ಬನ್ನಿ ನಿಮಗೆ ಒಳ್ಳೆ ಮಾದರಿ ಶಾಲೆ ನಿರ್ಮಾಣ ಮಾಡಲು ಸಹಾಯವಾಗುತ್ತದೆ. ಅದೆ ರೀತಿ ನಮ್ಮ ಕ್ಷೇತ್ರಕ್ಕೆ ಬಜೆಟ್ ತುಂಬಾ ಕಡಿಮೆ ಇದೆ. ಆದರೂ ಸಹ ಹೂಬಳಿ ಪ್ರದೇಶವಾದ ಈ ಗ್ರಾಮದಲ್ಲಿ ಒಳ್ಳೆ ಮಾದರಿ ಶಾಲೆಯನ್ನು ನಿರ್ಮಾಣ ಮಾಡಲು ನಾನು ಶ್ರಮಿಸುತ್ತೇನೆ ಎಂದು ಹೇಳಿದರು.
ಕ್ಷೇತ್ರಕ್ಕೆ ಬಜೆಟ್ ಕಡಿಮೆ ಇದೆ- ಶಾಸಕ ಬಂಡೆಪ್ಪ ಕಾಶೆಂಪುರ್ ಹೇಳಿಕೆ
Please follow and like us: