ಖಾಸಗಿ ಮೆಡಿಕಲ್ ಕಾಲೇಜು,ಆಸ್ಪತ್ರೆಗಳಿಗೆ ಸಿಎಂ ಎಚ್ಚರಿಕೆ

ಕೋವಿಡ್ 19ರ ರೋಗಿಗಳಿಗೆ ಹಾಸಿಗೆ ನಿರಾಕರಿಸಬಾರದು,ಖಾಸಗಿ ಆಸ್ಪತ್ರೆಗಳು ಒಂದು ವೇಳೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಮುಖ್ಯಮಂತ್ರಿ ಸಭೆ ಬಳಿಕ ಮಾತನಾಡಿದ ಅವರು, 50% ಹಾಸಿಗೆಯನ್ನು ಬಿಟ್ಟುಕೊಡಬೇಕು ಎಂದಿದ್ದಾರೆ. ಹಾಗೆಯೇ ಇನ್ನು ಮುಂದೆ ನಾನು ಯಾವ ಸಭೆಯನ್ನು ನಡೆಸುವುದಿಲ್ಲ. ಕಷ್ಟದ  ಸಂದರ್ಭದಲ್ಲಿ ಯಾರೂ ಹಾಸಿಗೆಗೆ ನಿರಾಕರಿಸಬಾರದು.ನಿರಾಕರಿಸಿದರೆ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಮುಖ್ಯಮಂತ್ರಿ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ವಿವರಿಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ಕಿಡಿಗೇಡಿಗಳಿಂದ ಹತ್ತಿ ಬೆಳೆ ನಾಶ

Mon Jul 20 , 2020
ಹತ್ತಿ ಬೆಳೆ ನಾಶ ಪಡಿಸಿರುವ ಘಟನೆ ಮಧುಗಿರಿ ತಾಲ್ಲೂಕಿನ ಗಿರೇಗೌಡನಹಳ್ಳಿಯಲ್ಲಿ ನೆಡೆದಿದೆ. ರೈತ ದೇವರಾಜು ಎಂಬುವರ ಜಮೀನಿನಲ್ಲಿ ೧.೫ ಎಕರೆಯ ಹತ್ತಿ ಬೆಳೆಯನ್ನು ನಾಶ ಪಡಿಸಿರುವ ಕಿಡಿಗೇಡಿಗಳು. ಹತ್ತಿ ಬೆಳೆ ನಾಶದಿಂದ ರೈತನಿಗೆ ೭ ಲಕ್ಷ ಮೌಲ್ಯದ ಬೆಳೆ ನಾಷ್ಟವಾಗಿದೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Please follow and like us:

Advertisement

Wordpress Social Share Plugin powered by Ultimatelysocial