ಗುಂಡಲಬಂಡ ಜಲಪಾತದಲ್ಲಿ ಕೊಚ್ಚಿಹೋದ ತಂದೆ ಮಗ

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಬಳಿ ಇರುವ ಗುಂಡಲಬಂಡ ಜಲಪಾತಕ್ಕೆ ಈಜಲು ಹೋಗಿದ್ದ ನಾಲ್ಕು ಮಂದಿ ನೀರಿನ ಮಧ್ಯೆಯೆ ಸಿಲುಕಿಕೊಂಡಿದ್ದಾರೆ. ಗುಂಡಲಬಂಡ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ದೇವದುರ್ಗ ತಾಲ್ಲೂಕಿನ ಮೂಡಲಗುಂಡ ಗ್ರಾಮದವರು ಎಂದು ತಿಳಿದು ಬಂದಿದೆ. ಈಜಲು ಹೋದ ನಾಲ್ಕು ಜನರಲ್ಲಿ  ತಂದೆ ಮಗ ಇಬ್ಬರು ನೀರಲ್ಲಿ ಸಿಗದಂತೆ ಕೊಚ್ಚಿಕೊಂಡು ಹೋಗಿದ್ದಾರೆ. ಒಬ್ಬ ನೀರಿನ ಮಧ್ಯೆ ಸಿಲುಕಿಕೊಂಡಿದ್ದು, ಮತ್ತೋರ್ವ ನೀರಿನಲ್ಲಿ ಈಜಿಕೊಂಡು ದಡ ಸೇರಿಕೊಂಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಲಿಂಗಸೂಗೂರು ಪೋಲಿಸರು ಮತ್ತು ಲಿಂಗಸೂಗೂರು ವಿಭಾಗದ ಡಿವೈಎಸ್ಪಿ ಭೇಟಿ ನೀಡಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್​​ ಸದಸ್ಯೆಯ ಜಾತಿ ಪ್ರಮಾಣ ಪತ್ರ ರದ್ದು-  ಮಾಜಿ ಶಾಸಕ ನಾಡಗೌಡ ಆರೋಪ

Fri Jul 24 , 2020
ಕಾಂಗ್ರೆಸ್ ಪಕ್ಷದ ಸದಸ್ಯೆ ಲತಾ ಗೂಳಿ ಅವರಿಗೆ ಕೊಟ್ಟ ಜಾತಿ ಪ್ರಮಾಣ ಪತ್ರವನ್ನು ರಾತ್ರೋರಾತ್ರಿ ರದ್ದುಗೊಳಿಸುವ ಮೂಲಕ ಸರ್ಕಾರಿ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಆರೋಪಿಸಿದ್ದಾರೆ. ಮುದ್ದೇಬಿಹಾಳನಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಯಾರದ್ದೋ  ಕೈಗೊಂಬೆಯಾಗಿ ಕೆಲಸ ಮಾಡುವುದಲ್ಲ. ತಾಲೂಕು ಮ್ಯಾಜಿಸ್ಟ್ರೇಟ್​ಗಳು ಈ ರೀತಿ ಕೆಲಸ ಮಾಡಿದರೆ ಸಾಮಾನ್ಯ ಜನರಿಗೆ ಇವರ ಮೇಲೆ ಯಾವ ನಂಬಿಕೆ ಉಳಿಯಲು ಸಾಧ್ಯವಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್​​ […]

Advertisement

Wordpress Social Share Plugin powered by Ultimatelysocial