ಬೀದರ್ ಜಿಲ್ಲೆಯ ಔರಾದ ಪಟ್ಟಣದ ಹೊರವಲಯದಲ್ಲಿರುವ ಗೋ ಶಾಲೆ ಆವರಣದಲ್ಲಿ ಎಬಿವಿಪಿ ಸಂಘಟನೆ ಹಾಗೂ ಯುವ ಮುಖಂಡದ ವತಿಯಿಂದ ಸ್ವಚ್ಛತಾ ಹಾಗೂ ಸಸಿ ನೆಡುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದ ವೀರಯೋಧ ಗೋವಿಂದರಾವ್ ಶೇಡೋಳೆ ಬಲಿದಾನವನ್ನು ಸ್ಮರಿಸಲಾಯಿತು. ಹಾಗೂ ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಖಂಡಿಕೆರಿ ಗ್ರಾಮದ ಯೋಧ ರಾಮ ಶಂಕರ್ ಜಾಧವ್ ಇವರಿಗೆ ಸನ್ಮಾನ ಮಾಡಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಜಿಲ್ಲೆಯ ವರವಟ್ಟಿ ಗ್ರಾಮದ ವೀರ ಯೋಧನಿಗೆ ನಮನ ಸಲ್ಲಿಸುವ ಹಾಗೂ ರಾಮ ಜಾಧವ ಯೋಧ ರಿಗೆ ಸನ್ಮಾನ ಮೂಲಕ ಯುವಕರು ಕಾರ್ಗಿಲ್ ವಿಜಯ ದಿವಸ್ ಆಚರಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರಾದ ಹವಪ್ಪ ಡ್ಯಾಡೆ, ಅಶೋಕ ಅಲಮಾಜೆ, ವೀರೇಶ್ ಬರೊಳೆ, ಪಂಡರಿ ರಾಠೋಡ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.