ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ರಸ್ತೆಗಿಳಿದ ಐಟಿ ಉದ್ಯೋಗಿಗಳು

 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಿ ಕೌಶಲ್ಯ ಅಭಿವೃದ್ಧಿ ಪ್ರಕರಣದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿರುವುದು ಗೊತ್ತೇ ಇದೆ. ಸದ್ಯ ಚಂದ್ರಬಾಬು ರಾಜಮಂಡ್ರಿಯ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಎಪಿ ಸರ್ಕಾರದ ಪಿತೂರಿಯ ಭಾಗವಾಗಿ ಚಂದ್ರಬಾಬು ಅವರನ್ನು ಅಕ್ರಮವಾಗಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಟಿಡಿಪಿ ಕಾರ್ಯಕರ್ತರು ಆಂಧ್ರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ಇವರಿಗೆ ಜೊತೆಯಾಗಿ ಹೈದರಾಬಾದ್, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಐಟಿ ಉದ್ಯೋಗಿಗಳು ಪ್ರತಿಭಟನೆಗಿಳಿದಿದ್ದಾರೆ.

ಹೈದರಾಬಾದ್ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಐಟಿ ಉದ್ಯೋಗಿಗಳು ಚಂದ್ರಬಾಬು ಬಂಧನವನ್ನು ವಿರೋಧಿಸಿ ರಸ್ತೆಗಿಳಿದರು. ಹಲವು ಐಟಿ ಕಂಪನಿಗಳ ಉದ್ಯೋಗಿಗಳು ಮಾದಾಪುರ, ಹೈಟೆಕ್ ಸಿಟಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ‘ನಾನು ಸಿಬಿಎನ್‌ನೊಂದಿಗೆ ಇದ್ದೇನೆ’ ಎಂದು ಘೋಷಣೆಗಳನ್ನು ಕೂಗಿದರು.

ಹೈದರಾಬಾದ್, ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಚಂದ್ರಬಾಬು ಬಂಧನವನ್ನು ವಿರೋಧಿಸಿ ರಸ್ತೆಗಿಳಿದ ಐಟಿ ಉದ್ಯೋಗಿಗಳನ್ನು ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅಭಿನಂದಿಸಿದರು. ಇದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು, ‘ಹೈದರಾಬಾದ್, ಬೆಂಗಳೂರು ಸೇರಿದಂತೆ ಇತರೆ ನಗರ, ಪಟ್ಟಣಗಳಲ್ಲಿ ಸಾವಿರಾರು ಜನ ರಸ್ತೆಗಿಳಿದಿದ್ದಾರೆ ನಾನು ನೌಕರರನ್ನು ಅಭಿನಂದಿಸುತ್ತೇನೆ. ಚಂದ್ರಬಾಬು ನಾಯ್ಡು ಮೇಲೆ ನಿಮ್ಮ ಬೇಷರತ್ತಾದ ಪ್ರೀತಿ ಮತ್ತು ವಾತ್ಸಲ್ಯವನ್ನು ಧಾರೆಯೆರೆದಿದ್ದಕ್ಕಾಗಿ ನಾವು ಪ್ರತಿಯೊಬ್ಬರಿಗೂ ಚಿರಋಣಿಯಾಗಿದ್ದೇವೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಲೋಕೇಶ್ ಟ್ವೀಟ್ ಮಾಡಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

'ಮಕ್ಕಳ ರಕ್ಷಣೆ'ಗೆ ತಾಯಿಯ ಪ್ರೀತಿಯೊಂದೇ ಸಾಕಾಗುವುದಿಲ್ಲ - ಬಾಂಬೆ ಹೈಕೋರ್ಟ್

Sat Sep 16 , 2023
ನವದೆಹಲಿ: ಇತ್ತೀಚಿನ ಕಸ್ಟಡಿ ಪ್ರಕರಣದಲ್ಲಿ, ಬಾಂಬೆ ಹೈಕೋರ್ಟ್ ಚಿಕ್ಕ ಮಗುವಿಗೆ ಯಾವುದು ಉತ್ತಮ ಎಂದು ನಿರ್ಧರಿಸುವುದು ಮಗುವಿನ ತಾಯಿ ನೀಡುವ ಪ್ರೀತಿ ಮತ್ತು ಆರೈಕೆಯನ್ನು ಮಾತ್ರ ಅವಲಂಬಿಸಿರುವುದಿಲ್ಲ ಎಂದು ತೀರ್ಪು ನೀಡಿದೆ. ಈ ಪ್ರಕರಣವನ್ನು 2020 ರಲ್ಲಿ ತಂದೆಯೊಬ್ಬರು ನ್ಯಾಯಾಲಯಕ್ಕೆ ತಂದರು, ಅವರು ಯುನೈಟೆಡ್ ಸ್ಟೇಟ್ಸ್ನಲ್ಲಿ ಜನಿಸಿದ ತನ್ನ 3 ವರ್ಷದ ಮಗುವನ್ನು ಕಸ್ಟಡಿಗೆ ಕೋರಿದರು. ತಂದೆ ಮಗುವನ್ನು ತನ್ನೊಂದಿಗೆ ಯುಎಸ್‌ಎಗೆ ಕರೆದೊಯ್ಯುವ ಗುರಿಯನ್ನು ಹೊಂದಿದ್ದರು. ಕಸ್ಟಡಿ ನಿರ್ಧಾರಗಳು ಮಗುವಿನ […]

Advertisement

Wordpress Social Share Plugin powered by Ultimatelysocial