ಬೆಟ್ಟದಹಳ್ಳಿ ನಿವಾಸಿ ಶೋಹೆಬ್(26) ನನ್ನು ಸಾಯಿನಗರದಲ್ಲಿರುವ ಸಂಭ್ರಮ ಕಾಲೇಜು ಸಮೀಪದ ಖಾಲಿ ನಿವೇಶನಕ್ಕೆ ಎಳೆದೊಯ್ದು ದುಷ್ಕರ್ಮಿಗಳು ಮರಗೆಲಸ ಮಾಡುವ ಯುವಕನಿಗೆ ಚಾಕುವಿನಿಂದ ಹೊಟ್ಟೆ, ಎದೆ ಮತ್ತಿತರ ಭಾಗಗಳಿಗೆ ಇರಿದು ದುರಂತವಾಗಿ ಕೊಲೆ ಮಾಡಿ ಪರಾರಿಯಾಗಿರುವ ಬೆಳಕಿಗೆ ಬಂದಿದೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದರು. ನಂತರ ಸ್ಥಳಕ್ಕೆ ಬಂದ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಶೋಹೆಬ್ ಕೊಲೆಗೆ ನಿಖರವಾದ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಒಲೆಗಾರರನ್ನು ಪತ್ತೆಹಚ್ಚುವ ಕಾರ್ಯವನ್ನು ಕೈಗೊಂಡಿದ್ದಾರೆ.