ಚಿನ್ನದ ಅಂಗಡಿ ಮಾಲೀಕರೇ ಇವರ ಬಗ್ಗೆ ಎಚ್ಚರವಿರಲಿ..!

ಚಿನ್ನದ ಅಂಗಡಿ ಮಾಲೀಕರೇ ಎಚ್ಚರ! ಈ ಖತರ್ನಾಕ್​​​ ಲೇಡಿಗಳ ಕಥೆ ಓದಿದ್ರೆ ಬೆಚ್ಚಿಬೀಳ್ತೀರಾ

ಕೆದರಿರೋ ಕೂದಲು.. ಬಾಡಿರೋ ಮುಖ.. ಅಮಾಯಕಳಂತೆ ನಿಂತಿರೋ ಈಕೆ ಹೆಸರು ರತ್ನ ವೇಡಿವೇಲು.. ತನ್ನದ್ದೇನು ತಪ್ಪೇ ಇಲ್ಲದಂತೆ ನಗ್ತಾ ಫೋಟೋಗೆ ಫೋಸ್​​ ಕೊಟ್ಟಿರೋ ಈಕೆ ಹೆಸ್ರು ಕೃಷ್ಣವೇಣಿ. ​​ಇವರಿಬ್ಬರು ಮೂಲತಃ ತಮಿಳುನಾಡಿನ ನಿವಾಸಿಗಳು.. ಹಲವು ಠಾಣೆಗೆ ಬೇಕಾಗಿರೋ ಖತರ್ನಾಕ್​​ ಲೇಡಿಗಳು.. ಬರೋಬ್ಬರಿ 10 ವರ್ಷದ ನಂತರ ಸಾಕ್ಷಿ ಸಮೇತ ಪೊಲೀಸರ ಕೈಯಲ್ಲಿ ಲಾಕ್​ ಆಗ್ಬಿಟ್ಟಿದ್ದಾರೆ.

ಹೌದು… ಸೋಗಿನಲ್ಲಿ ಈ ಲೇಡಿ ಕೇಡಿಗಳು ಚಿನ್ನದಂಗಡಿಗೆ ಹೀಗೆ ಎಂಟ್ರಿ ಕೊಡ್ತಾರೆ. ನಕಲಿ ಚಿನ್ನದೊಂದಿಗೆ ಬರೋ ಈ ಚಾಲಾಕಿಗಳು, ಚಿನ್ನದ ಬಾಕ್ಸ್​​ ಓಪನ್​ ಮಾಡ್ತಾರೆ. ಬಲ ಕೈಯಲ್ಲಿ ಗೋಲ್ಡ್​​​​​ ರಿಂಗ್​ ಎಗರಿಸಿದ್ರೆ, ಎಡಗೈಯಲ್ಲಿ ಸಲೀಸಾಗಿ ರೋಲ್ಡ್​​ ಗೋಲ್ಡ್​​ ಅನ್ನ ಅದೇ ಜಾಗದಲ್ಲಿ ಇಟ್ಟು ​ಯಾಮಾರಿಸಿಯೇ ಬಿಡ್ತಾರೆ.

ಬೆಂಗಳೂರಿನ ಚಿನ್ನದ ಅಂಗಡಿಗಳನ್ನೇ ಹೆಚ್ಚಾಗಿ ಟಾರ್ಗೆಟ್​​ ಮಾಡ್ತಿದ್ದ ಈ ಚಾಲಾಕಿಯರು, ಎಂದಿನಂತೆ ಅಂದೂ ಸಹ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ರು. ಯಾವಾಗ ಅಂಗಡಿ ಮಾಲೀಕ ಬನಶಂಕರಿ ಪೊಲೀಸ್​ ಮೆಟ್ಟಿಲೇರಿದ್ನೋ ಈ ಸಿಸಿಟಿವಿ ಪತ್ತೆಯಾಗಿದ್ದು, ಇಬ್ಬರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಅದೇನೆ ಇರ್ಲಿ, ಇಂತಹ ಕಿಲಾಡಿಗಳ ಬಗ್ಗೆ ಒಡವೆ ಅಂಗಡಿ ಮಾಲೀಕರು ಎಚ್ಚರವನ್ನು ವಹಿಸಲೇಬೇಕು.

Please follow and like us:

tmadmin

Leave a Reply

Your email address will not be published. Required fields are marked *

Next Post

ಡಿಎಂಕೆ V/S ಬಿಜೆಪಿ ಮಧ್ಯೆ ಭುಗಿಲೆದ್ದ ಧರ್ಮಯುದ್ಧ..!

Sun Sep 3 , 2023
ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಬಿಜೆಪಿ ನಾಯಕರ ಮಧ್ಯೆ ಸನಾತನ ಯುದ್ಧ ಘೋಷಣೆಯಾಗಿದೆ. ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಆಡಿರೋ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಈ ಬಗ್ಗೆ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದು, ಉದಯನಿಧಿ ಸ್ಟಾಲಿನ್‌ […]

Advertisement

Wordpress Social Share Plugin powered by Ultimatelysocial