ಲಡಾಖ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ವಿರುದ್ಧ ಅತ್ಯಂತ ಗಟ್ಟಿಯ ನಿಲುವು ತೆಳೆದರು ಇದು ಹೆಮ್ಮೆಯ ಸಂಗತಿ ಎಂದು ಅಮೆರಿಕದ ಸಂಸತ್ ಸದಸ್ಯ ಜಾನ್ ಕೆನಡಿ ಹೇಳಿದ್ದಾರೆ.ಲಡಾಖ್ನಲ್ಲಿ ಬಿಕ್ಕಟ್ಟು ಉಂಟಾಗಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಜೂ.೧೫ರಂದು ರಕ್ತಸಿಕ್ತ ಘರ್ಷಣೆ ನಡೆದು ಭಾರತದ ೨೦ ಯೋಧರು ಹುತಾತ್ಮರಾದ ಹಲವು ದಿನಗಳ ಬಳಿಕ ಕೆನಡಿ ಈ ಹೇಳಿಕೆ ನೀಡಿದ್ದಾರೆ. ಜತೆಗೆ ಚೀನಾ ವಿರುದ್ಧದ ಹೋರಾಟದಲ್ಲಿ ಅದರ ವಿರೋಧಿ ರಾಷ್ಟ್ರಗಳೆಲ್ಲವೂ ಒಂದಾಗಬೇಕು ಎಂದು ಕರೆ ನೀಡಿದ್ದಾರೆ.ಚೀನಾದ ಸವಾಲಿಗೆ ಭಾರತದ ಪ್ರಧಾನಿ ಮೋದಿ ಸ್ಪಂದಿಸಿದ ರೀತಿ ಅಮೋಘವಾಗಿತ್ತು.
ಇದೀಗ ಕೆನಡಾದ ಪ್ರಧಾನಿ ಕೂಡ ಚೀನಾದ ಕುತ್ಸಿತ ಬುದ್ಧಿಯನ್ನು ಜಗತ್ತಿನೆದುರು ಅನಾವರಣಗೊಳಿಸಿದೆ. ಇದು ಕೂಡ ಹೆಮ್ಮೆಯ ವಿಷಯ. ಚೀನಾ ವಿರುದ್ಧದ ಅಸಮಾಧಾನವನ್ನು ಹೊರಹಾಕಲು ಯಾವುದೇ ರಾಷ್ಟ್ರಗಳು ಹಿಂದೇಟು ಹಾಕುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.