ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಇದೊಂದು ನಿದರ್ಶನ

ಜಿಲ್ಲಾಡಳಿತದ ನಿರ್ಲಕ್ಷಕ್ಕೆ ಇದೊಂದು ನಿದರ್ಶನ..  ಸುಮಾರು 18 ರಿಂದ 20 ಜನ ಕ್ವಾರಂಟೈನ್ ಇದ್ದವರನ್ನು ರಾತ್ರಿ 2 ಗಂಟೆ ಹೊತ್ತಿಗೆ ದೇವನಹಳ್ಳಿಯ ಮುಖ್ಯರಸ್ತೆಯಲ್ಲಿರುವ ದೇವರಾಜು ಆರಸ್ ಹಾಸ್ಟೆಲ್ ಮುಂದೆ ಬಿಟ್ಟಿದ್ದಾರೆ.. ರಾತ್ರಿಯಿಂದ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೆ ಅಷ್ಟು ಜನ ರಾತ್ರಿಪೂರ್ತಿ ಊಟ ತಿಂಡಿ ಇಲ್ಲದೆ ರಸ್ತೆಯಲ್ಲೇ ಕಳೆದಿದ್ದಾರೆ… ಸುತ್ತ ಮುತ್ತ ಮನೆಗಳಿರುವ ಈ ಪ್ರದೇಶದಲ್ಲಿ ಜನರು ಇದನ್ನು ನೋಡಿ ಗಾಬರಿಗೊಂಡು  ತಕ್ಷಣವೇ ಸ್ಪೀಡ್ ನ್ಯೂಸ್ ಬಂದ  ಮಾಹಿತಿ ಆದರಿಸಿ ನೋಡಿದಾಗ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ.. ಇದರಲ್ಲಿ ಮಹಿಳೆಯರು ಕೂಡ ಇದ್ದು ಅವರಿಗೂ ಯಾವುದೇ ಶೌಚಾಲಯದ ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ.. ಇದರ ಬಗ್ಗೆ ಸಾಕಷ್ಟು ಬಾರಿ ಸುತ್ತಮುತ್ತ ಇರುವ ಜನರು ಇಲ್ಲಿನ ತಹಶೀಲ್ದಾರ್ ರವರಿಗೆ ವಿಷಯ ಮುಟ್ಟಿಸಿದರು ಸಹ ಮತ್ತೆ ಮತ್ತೆ ಅದೇ ವೈಫಲ್ಯ ಎದ್ದು ಕಾಣುತ್ತಿದೆ..ಸ್ಪೀಡ್ ನ್ಯೂಸ್ ಕ್ಯಾಮೆರಾ ಕಂಡ ತಕ್ಷಣ ಕ್ವಾರಂಟೈನ್ ಇದ್ದವರನ್ನು ಪೊಲೀಸರು ಮನವೊಲಿಸಿ ಅವರನ್ನು ಹಾಸ್ಟೆಲ್ ಒಳಗೆ ಕಳುಹಿಸಿ ಅವರಿಗೆ ತಿಂಡಿ ವ್ಯವಸ್ಥೆ ಮಾಡಿಕೊಡಲಾಯಿತು.. ಇದೇ ರೀತಿ ಸರ್ಕಾರ ಸಾಕಷ್ಟು ಬಾರಿ ವೈಫಲ್ಯಗಳನ್ನು ತೋರಿಸುವಲ್ಲಿ ಯಶಸ್ವಿಯಾಗುತ್ತಿದೆ.. ಇನ್ನಾದರೂ ಎಚ್ಚೆತ್ತುಕೊಂಡು ಈ ರೀತಿ ಅನಾಹುತಗಳಿಗೆ ಎಡೆ ಮಾಡಿಕೊಡದೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಾರ ಎಂಬುದನ್ನು ನಿರೀಕ್ಷಿಸಬೇಕಾಗಿದೆ..

Please follow and like us:

Leave a Reply

Your email address will not be published. Required fields are marked *

Next Post

ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ

Thu Jul 23 , 2020
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಹೊರ ಹೊಲಯದಲ್ಲಿ ತಡ ರಾತ್ರಿ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಎ.ಎಸ್.ಐ ಮೃತಪಟ್ಟಿದ್ದಾರೆ. ಶ್ರೀನಿವಾಸಪುರ ಪೋಲಿಸ್ ಠಾಣೆಯ ಎಎಸ್ಐ ಮಂಜುನಾಥ್ (೫೦) ರ‍್ತವ್ಯ ಮುಗಿಸಿ ಕೋಲಾರಕ್ಕೆ ವಾಪಸ್ ಆಗುತ್ತಿದ್ದಾಗ ವೇಳೆ ಈ ದರ‍್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆ ಗೆ ಕೋಲಾರದ ಅರ್.ಎಲ್ ಜಾಲಪ್ಪ ಆಸ್ಪತ್ರೆಗೆ ರವಾನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶ್ರೀನಿವಾಸಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Please […]

Advertisement

Wordpress Social Share Plugin powered by Ultimatelysocial