ಡಿ.ಕೆ.ಶಿವಕುಮಾರ್ ನನ್ನ ಮಿತ್ರ ಅಲ್ಲ ಪಕ್ಷದ ಅಧ್ಯಕ್ಷ ಅಷ್ಟೇ

ಡಿ.ಕೆ.ಶಿವಕುಮಾರ್ ನನ್ನ ಮಿತ್ರ ಅಲ್ಲ. ಒಂದು ಪಕ್ಷದ ಅಧ್ಯಕ್ಷ ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಬೇರೆ, ಅವರ ಪಕ್ಷ ಬೇರೆ. ಬರೀ ಟಿವಿಯಲ್ಲಿ ‘ಪ್ರತಿಜ್ಞಾ’ ಅಂತಾ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಡಿಕೆಶಿ ಕಾರ್ಯಕ್ರಮಕ್ಕೆ ಮಹತ್ವ ಕೊಡಬೇಕಿಲ್ಲ ಎಂದರು. ಒಂದು ಮದುವೆ ಮಾಡಿಸಬೇಕಾದರೆ ಊಟ ಹಾಕಿಸುತ್ತೇವೆ. ನಮ್ಮವರು ಅಂತಾ ಎಲ್ಲರೂ ಊಟಕ್ಕೆ ಬರ್ತಾರಾ?. ಡಿಕೆ ಶಿವಕುಮಾರ್ ಅಧಿಕಾರ ಕಾರ್ಯಕ್ರಮವೂ ಹಾಗೆ. ಟವಿಯಲ್ಲಿ ಕಾರ್ಯಕ್ರಮ ಎಲ್ಲರೂ ನೋಡುತ್ತಾರೆ ಎನ್ನಲಾಗದು. ಜನರನ್ನು ಸೇರಿ ತಮ್ಮ ಶಕ್ತಿ ತೋರಿಸಿದ್ದರೆ ‘ಹೌದಪ್ಪ’ ಅಂತಿದ್ದೆ. ಈಗ ಹತ್ತು ಲಕ್ಷ ಜನರ ಸೇರಿದ್ದರು ಎಂದರೂ ನಾವು ಸುಮ್ಮನಿರಬೇಕಾಗುತ್ತದೆ. ಡಿಕೆಶಿ ಶಕ್ತಿ ಏನಿದೆ ಅಂತಾ ನನಗೆ ಗೊತ್ತಿದೆ ಎಂದು ರಮೇಶ ವ್ಯಂಗ್ಯವಾಡಿದರು.

Please follow and like us:

Leave a Reply

Your email address will not be published. Required fields are marked *

Next Post

ಆಧುನಿಕ ಭಗೀರಥ ಮಂಡ್ಯ ಕಾಮೇಗೌಡರ ಬಯಕೆ

Thu Jul 2 , 2020
ಆಧುನಿಕ ಭಗೀರಥ ಕಾಮೇಗೌಡರಿಗೆ ಈಗ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಸಕ್ಕರೆ ನಾಡು ಮಂಡ್ಯದ ಈ ಇಳಿವಯಸ್ಸಿನ ಅಜ್ಜ ಈಗ ಸುದ್ದಿಯ ಕೇಂದ್ರಬಿಂದು. ಅದಕ್ಕೆ ಕಾರಣ ಮೊನ್ನೆ ಭಾನುವಾರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಹೆಸರು ಮತ್ತು ಸಾಧನೆಗಳನ್ನು ಪ್ರಸ್ತಾಪಿಸಿದ್ದು. ಇದಾದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊ ಕರೆ ಮಾಡಿ […]

Advertisement

Wordpress Social Share Plugin powered by Ultimatelysocial