ಬೀದರ ಜಿಲ್ಲೆಯಲ್ಲಿ ದಿನ ಕಳೆದಂತೆ ಮಹಾಮಾರಿ ಕೊರೊನಾ ಭೀತಿ ಹೆಚ್ಚುತ್ತಿದೆ. ಈ ನಡುವೆ ಸಾಂಕ್ರಾಮಿಕ ರೋಗ ಡೆಂಗ್ಯೂ ಭಿತಿ ಶುರುವಾಗುತ್ತಿದೆ. ಕಳೆದ ಮೂರು ನಾಲ್ಕು ದಿನದಿಂದ ವರುಣ ಕಣ್ಣಾಮುಚ್ಚಾಲೆಯಾಡುತ್ತಿದ್ದು, ನಗರದ ಬಡಾವಣೆಯ ಚೆರಂಡಿಗಳಲ್ಲಿ ಮಳೆ ನೀರು ಹರಿಯದೆ ರಸ್ತೆಯಲ್ಲಾ ತಲಾವರಿಸುತ್ತಿದೆ. ಇದರ ಜೊತೆಯಲ್ಲಿ ಮನೆಗಳಿಗೂ ಚರಂಡಿಯಲ್ಲಿನ ಹೊಲಸು ನೀರು ಮನೆಗಳಿಗೆ ನುಗ್ಗುವ ಭೀತಿ ಶುರವಾಗಿದೆ. ನಗರದ ಕೇಂದ್ರೀಯ ವಿದ್ಯಾಲಯದ ಕಂಪೌಂಡ ಹತ್ತಿರದ ಹಳೆಯ ಆರ್ಶ ಕಾಲೋನಿಯಲ್ಲಿ ಚರಂಡಿಗೆ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಕೊಳಚೆ ನೀರು ಮನೆ ಬಾಗಿಲು ತಲುಪಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಮನೆ ಬಿಟ್ಟು ಹೋರ ಬಾರದ ಪರಿಸ್ಥಿತಿಯಲ್ಲೊ ಜನ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ, ಈಗ ವರುಣನ ರ್ಭಟಕ್ಕೂ ಜನ ತತ್ತರಿಸಿದ್ದು, ಡೆಂಗ್ಯೂ ಜ್ವರದ ಭೀತಿ ಜಿಲ್ಲೆಯ ಜನತೆಗೆ ಕಾಡುತ್ತಿದೆ. ಇನ್ನಾದ್ರು ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಡೆಂಗ್ಯೂ ಜ್ವರದ ಭೀತಿಯಲ್ಲಿ ಬೀದರ್ ಜನತೆ
Please follow and like us: