ತನ್ನ ಭಾವಿ ಪತಿಯಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ, ವಧು ಮದುವೆಯನ್ನು ರದ್ದುಗೊಳಿಸಿ ಅದೇ ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಸಂಬಂಧಿಕ ಹುಡುಗನನ್ನು ಮದುವೆಯಾಗಿದ್ದಾರೆ.
ಈ ಬೆಳವಣಿಗೆಗಳಿಂದ ನಿರಾಸೆಗೊಂಡ ವರ ಇದೀಗ ಪಂರುತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರತಕ್ಷತೆ ಮತ್ತು ಮದುವೆ ವ್ಯವಸ್ಥೆಗಾಗಿ ಅವರ ಕುಟುಂಬದವರು ಖರ್ಚು ಮಾಡಿದ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದಾರೆ. ಚೆನ್ನೈನ ಖಾಸಗಿ ಸಂಸ್ಥೆಯೊಂದರಲ್ಲಿ ಹಿರಿಯ ಇಂಜಿನಿಯರ್ ಆಗಿ ಉದ್ಯೋಗದಲ್ಲಿರುವ ಪಂರುತಿ ಬಳಿಯ ಪೆರಿಯಕಟ್ಟುಪಾಳ್ಯಂನ ಯುವಕ ಮತ್ತು ಪನ್ರುತಿಯ ಸ್ನಾತಕೋತ್ತರ ಪದವಿ ಪಡೆದಿರುವ ಮಹಿಳೆ ತಮ್ಮ ಪೋಷಕರು ಮತ್ತು ಎರಡೂ ಕುಟುಂಬದ ಹಿರಿಯರ ಆಶೀರ್ವಾದದೊಂದಿಗೆ ನವೆಂಬರ್ 6 ರಂದು ಔಪಚಾರಿಕವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 19 ರಂದು ಪಂರುತಿಯಲ್ಲಿ ಮತ್ತು ಮರುದಿನ ಕಡಂಪುಲಿಯೂರು ಗ್ರಾಮದಲ್ಲಿ ಮದುವೆ ಇಟ್ಟುಕೊಂಡಿದ್ದರು. ಕೆಲವು ಸಮುದಾಯಗಳ ಸಂಪ್ರದಾಯದಂತೆ ಮದುವೆಯ ಹಿಂದಿನ ದಿನ ಆರತಕ್ಷತೆಗಾಗಿ ಸಂಘಟಕರು ಡಿಜೆಯನ್ನು ಸಹ ಏರ್ಪಡಿಸಿದ್ದರು. ವರ ಮತ್ತು ವಧು ಸಂತೋಷದಿಂದ ಡಿಜೆ ಟ್ಯೂನ್ಗಳಿಗೆ ನೃತ್ಯ ಮಾಡುತ್ತಿದ್ದರು. ಆಕೆಯ ಸೋದರಸಂಬಂಧಿ ಆರಂಭದಲ್ಲಿ ದಂಪತಿಗಳ ಮದ್ಯೆ ಬಂದು ಕೈಗಳನ್ನು ಹಿಡಿದು ಅವರೊಂದಿಗೆ ನೃತ್ಯ ಮಾಡಿದ್ದು ಇದರಿಂದ ಕೆರಳಿದ ವರ ಅವರ ನಡುವೆ ಬಂದು ಕಪಾಳಮೋಕ್ಷ ಮಾಡಿದ್ದಾನೆ.
ಆಘಾತ ಮತ್ತು ಅವಮಾನಕ್ಕೆ ಒಳಗಾದ ವಧು ಕೂಡಲೇ ಮದುವೆಯನ್ನು ರದ್ದುಗೊಳಿಸಿದ್ದು ಆಕೆಯ ನಿರ್ಧಾರವನ್ನು ಪೋಷಕರು ಅನುಮೋದಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ತಮ್ಮ ಸಂಬಂಧಿಕರಲ್ಲೆ ಒಬ್ಬ ಸೂಕ್ತ ವರನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದು ಮತ್ತು ಮರುದಿನ ಬೆಳಿಗ್ಗೆ, ವಧು ನಿಗದಿತ ಸಮಯ ಮತ್ತು ದಿನಾಂಕ ಮತ್ತು ಹೊಸ ಸ್ಥಳದಲ್ಲಿ ಹೊಸ ವರನನ್ನು ವಿವಾಹವಾಗಿದ್ದಾರೆ.
ಇನ್ನು ವರ ತನ್ನ ದೂರಿನಲ್ಲಿ ಆರತಕ್ಷತೆ ಹಾಗೂ ಮದುವೆಗೆ 7 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿದ್ದೇವೆ, ಪರಿಹಾರ ಕೊಡಿಸಲು ಸಹಾಯ ಮಾಡುವಂತೆ ಕೋರುತ್ತೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪಂರುತಿ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಎಸ್ ವಲ್ಲಿ ಮಾತನಾಡಿ, ವರನು ತನ್ನ ಸೋದರಸಂಬಂಧಿಯೊಂದಿಗೆ ನೃತ್ಯ ಮಾಡಿದ್ದಕ್ಕಾಗಿ ವಧುವಿಗೆ ಕಪಾಳಮೋಕ್ಷ ಮಾಡಿದನೆಂದು ಆರೋಪ ಕೇಳಿಬಂದಿದೆ. ನಂತರ ವಧು ವರನನ್ನು ತಿರಸ್ಕರಿಸಿ ಆಕೆಯ ಪೋಷಕರು ಆಕೆಯನ್ನು ಬೇರೆ ಪುರುಷನೊಂದಿಗೆ ವಿವಾಹ ಮಾಡಿದ್ದಾರೆ.
ನಾವು ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಿದ್ದೇವೆ ವಿಚಾರಣೆಗೆ ಬರುವಂತೆ ನಾವು ಎರಡು ಕಡೆಯ ಕಕ್ಷಿದಾರರಿಗೆ ಸೂಚಿಸಿದ್ದೇವೆ ಎಂದು ವಲ್ಲಿ ಹೇಳಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada