ಕೊಲ್ಹಾರ ತಾಲ್ಲೂಕಿನ ಸಿದ್ದನಾಥ ಗ್ರಾಮದ ಬಳಿ ಇರುವ ಕೃಷ್ಣಾ ನದಿಯಲ್ಲಿ ನಿನ್ನೆ ಸಂಜೆ ಮೂವರು ಮೀನುಗಾರರು ತೆಪ್ಪದಲ್ಲಿ ಮೀನುಗಾರಿಕೆ ಮಾಡಲು ಹೋಗಿದ್ದರು ಇದೆ ವೇಳೆಯಲ್ಲಿ ಭಾರಿ ಗಾಳಿ ಮಳೆ ಸುರಿದ ಕಾರಣ ನದಿಯಲ್ಲಿ ತೆಪ್ಪ ನೀರಿನ ವತಡ ತಡೆಯದೆ ತೆಪ್ಪ ನೀರಿನಲ್ಲಿ ಮುಳುಗಿದೆ.ಇದರಲ್ಲಿ ಇಬ್ಬರು ನಾಪತ್ತೆಯಾಗಿದ್ದರೆ. ಅಕ್ಷಯ ಲಮಾಣಿ (30), ಪರಶುರಾಮ ಲಮಾಣಿ ( 35 ) ರಮೇಶ ಲಮಾಣಿ ( 38 ) ಈ ಮೂವರಲ್ಲಿ ಇಬ್ಬರು ನದಿಯಲ್ಲಿ ಕಾಣೆಯಾಗಿದ್ದಾರೆ. ಕತ್ತಲಾದ ಕಾರಣ ಗುರುವಾರ ಶೋಧ ಕಾರ್ಯ ಮಾಡಲಾಗದೆ ಇಂದು ಬೆಳ್ಳಗೆ ಶೋಧ ಕಾರ್ಯ ಆರಂಭ ವಾಗಿದೆ. ಸುದ್ದಿ ತಿಳಿಯುತ್ತಲೇ ಕೊಲ್ಹಾರ ತಹಶೀಲ್ದಾರ ಎಂ.ಎಸ್. ಭಾಗವಾನ ಸ್ಥಳಕ್ಕೆ ಭೇಟಿ ನೀಡಿ ಈಜು ತಜ್ಞರು, ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಹಾಗೂ ಪೊಲೀಸರು ಸ್ಥಳಿಯ ಮೀನುಗಾರರ ಸಹಾಯದೊಂದಿಗೆ ನದಿಯಲ್ಲಿ ತೆಪ್ಪ ಮುಳುಗಿ ಕಾಣೆಯಾದವರ ಶೋಧ ಕಾರ್ಯ ನಡೆಸುತ್ತಿದ್ದಾರೆ.