ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಕೋವಿಡ್ ಹೆಚ್ಚಿರುವಂತ, ಲಸಿಕಾಕರಣದಲ್ಲಿ ( Vaccine Drive ) ಹಿಂದೆ ಉಳಿದಿರುವಂತ 18 ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಈ ಸಭೆಯಲ್ಲಿ ಕೋವಿಡ್ ನಿಯಂತ್ರಣ ( Covid19 Control ), ಲಸಿಕಾಕರಣದ ಬಗ್ಗೆ ಡಿಸಿಗಳಿಗೆ ಮಹತ್ವದ ಸೂಚನೆಯನ್ನು ಕೂಡ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು 18 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕರ ಅಧಿಕಾರಿಗಳು, ತಜ್ಞರು ಕೂಡ ಭಾಗವಹಿಸಿದ್ದರು. ಕೊರೋನಾ ನಿಯಂತ್ರಣ ಹಾಗೂ ಲಸಿಕಾಕರಣದ ತ್ವರಿತಗತಿಯ ಬಗ್ಗೆಯೂ ಚರ್ಚಿಸಲಾಯಿತು.
ಇನ್ನೂ ಕೊರೋನಾ ಪರೀಕ್ಷೆ ಹೆಚ್ಚಳಗೊಳಿಸುವಂತೆಯೂ ಜಿಲ್ಲಾಡಳಿತಕ್ಕೆ ಸೂಚಿಸಿದಂತ ಸಿಎಂ, ಕೋವಿಡ್ ತೀವ್ರಗತಿಯ ಈ ಸಂದರ್ಭದಲ್ಲಿ ಲಸಿಕಾಕರಣವನ್ನು ತ್ವರಿತಗೊಳಿಸುವಂತೆಯೂ ಸೂಚಿಸಿದರು. ಅಲ್ಲದೇ ಶೇ.100ರಷ್ಟು ಮೊದಲ ಡೋಲ್ ಲಸಿಕೆಯ ಗುರಿಯನ್ನು ಸಾಧಿಸುವಂತೆ ನಿರ್ದೇಶಿಸಿದರು.
ಇದಷ್ಟೇ ಅಲ್ಲದೇ 2ನೇ ಡೋಸ್ ಲಸಿಕೆಯನ್ನು ಚುರುಕುಗೊಳಿಸುವಂತೆ ಸೂಚಿಸಿದ ಅವರು, ಆಸ್ಪತ್ರೆಗಳ ಮೂಲ ಸೌಕರ್ಯದ ಬಗ್ಗೆ ಈಗಿನಿಂದಲೇ ಗಮನ ಹರಿಸುವಂತೆಯೂ ನಿರ್ದೇಶಿಸಿದರು. ಈ ಮೂಲಕ ಕೊರೋನಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada