ಪ್ರತಿನಿತ್ಯ ಅಧಿಕಾರಿಗಳು ಅಧಿಕಾರದ ದರ್ಪದಿಂದ ಅಮಾನವೀಯತೆಯಿಂದ ಒತ್ತಾಯ ಪೂರ್ವಕವಾಗಿ ದಂಡ ವಿಧಿಸುವುದರ ಕುರಿತು ರಬಕವಿ-ಬನಹಟ್ಟಿಯಲ್ಲಿ ಯುವ ಸಾಮಾಜಿಕ ಹೋರಾಟಗಾರ ಸುಮೀತ ಬಂಗಿ ಜನರ ಒಳಿತಿಗಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಜನರ ಸಮಸ್ಯೆಯನ್ನು ನಿಮ್ಮ ಮುಂದೆ ತೋರಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ.
ಸಾಕಷ್ಟು ಸರ್ಕಾರಿ ಅಧಿಕಾರಿಗಳೇ ಮಾಸ್ಕ ಇಲ್ಲದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ದಂಡ ಯಾಕೇ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.ಅಧಿಕಾರಿಗಳೇ ನಿಯಮ ಪಾಲಿಸದಿದ್ದಾಗ ಸಾರ್ವಜನಿಕರು ಹೇಗೆ ಪಾಲಿಸುತ್ತಾರೆ ಎಂದು ಜಿಲ್ಲಾಧಿಕಾರಿಗಳಿಗೆ ಟಾಂಗ್ ಉತ್ತರ ನೀಡಿದ್ದಾರೆ.