ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ಬಾರಿ ನಿಮ್ಮನ್ನು ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರು ಮಧ್ಯೆ ತರಬೇಡಿ. ನಮ್ಮನ್ನ ಕೇಳಿ ನಾವು ಉತ್ತರಿಸುತ್ತೇವೆ ಎಂದು ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಹೇಳಿದರು. ಕೋವಿಡ್ ನಿಯಂತ್ರಣದಲ್ಲಿ ಅಕ್ರಮ ಆಗಿದೆ ಎಂದು ಹೇಳುತ್ತೀರ. ಆದರೆ ದಾಖಲೆ ಪರಿಶೀಲನೆ ಮಾಡಲು ವಿಧಾನಸೌಧಕ್ಕೆ ಬನ್ನಿ ಅಂದರೆ ಬರುವುದಿಲ್ಲ. ಅಲ್ಲದೇ ಪಿಎಂ ಕೇರ್ ಲೆಕ್ಕವನ್ನು ಕೇಳುತ್ತೀರಾ. ಇದು ಹೇಗೆ ಆಗುತ್ತೆ ಸಿದ್ದರಾಮಯ್ಯನವರೇ ಎಂದು ವ್ಯಂಗ್ಯ ಮಾಡಿದ್ದಾರೆ. ಹಾಗೆಯೇ ಸಿದ್ದರಾಮಯ್ಯರನ್ನು ಟ್ವಿಟರ್ನಲ್ಲಿ ಬಾಸ್ ಎಂದು ಉಲ್ಲೇಖಿಸಿದ್ದ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವಗಾಲೂ ಹಿರಿಯರಿಗೆ ಗೌರವ ಕೊಡುವವನು. ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ. ಬಾಸ್ ಅಂತ ಗೌರವದಿಂದಲೇ ಕರೆದಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದರು.