ನನ್ನ ವಿರುದ್ಧ ಪೊಲೀಸರು ಷಡ್ಯಂತ್ರ – ನಟ ಚೇತನ್

 

ಬೆಂಗಳೂರು: ನಾನು ಯಾವುದೇ ಪ್ರಚೋದನೆಯ ರೀತಿಯಲ್ಲಿ ಮಾತನಾಡಿಲ್ಲ. ಅವಾಚ್ಯ ಶಬ್ದಗಳಿಂದಲೂ ನಿಂದಿಸಿಲ್ಲ. ಭಾರತೀಯ ಸಂವಿಧಾನದ ಕಾನೂನು ಪ್ರಕಾರವೇ ಹೋರಾಟ ಮಾಡ್ತಾ ಇದ್ದೇನೆ. ಆದ್ರೇ ನನ್ನ ವಿರುದ್ಧ ಪೊಲೀಸರು ಷಡ್ಯಂತ್ರ ಮಾಡುತ್ತಿದ್ದಾರೆ ಎಂಬುದಾಗಿ ಆ ದಿನಗಳು ಖ್ಯಾತಿಯ ನಟ ಚೇತನ್ ( Actor Chetan ) ಆರೋಪಿಸಿದ್ದಾರೆ.ಇಂದು ತಮಗೆ ಪೊಲೀಸ್ ಠಾಣೆಗೆ ತೆರಳಿ, ತಮಗೆ ಜೀವಭಯವಿದೆ. ಗನ್ ಮ್ಯಾನ್ ವ್ಯವಸ್ಥೆ ನೀಡುವಂತೆ ಮನವಿ ಮಾಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಓವರ್ ಸೀಸ್ ಕಾರ್ಡ್ ಹೊಂದಿರುವವನು. ಇಂಡಿಯನ್ ಸಿಟಿಜನ್ ಗೆ ಯಾವ ರೀತಿಯ ಹಕ್ಕಿದೆಯೋ ನನಗೂ ಇದೆ. ಆದ್ರೇ ಮತ ಹಾಕುವ ಹಕ್ಕಿಲ್ಲ. ಚುನಾವಣೆಗೆ ನಿಲ್ಲುವ ಹಕ್ಕು ಇಲ್ಲ ಎಂದರು.ನನ್ನ ತಾತ ಸ್ವಾತಂತ್ರ್ಯ ಹೋರಾಟಗಾರರು. ನನ್ನ ಅಜ್ಜಿಗೆ ಈಗಲೂ ಪೆನ್ಷನ್ ಬರ್ತಾ ಇದೆ. ಇವತ್ತು ನಾನು ಬೆಳೆದಿದ್ದೇನೆ ಅಂದ್ರೇ, ಅದಕ್ಕೆ ಕಾರಣ ಕರ್ನಾಟಕದ ಜನತೆ. ಈ ಮಣ್ಣಿನ ಮಕ್ಕಳ ಪರವಾಗಿ ನಾನು ಎಂದೆಂದಿಗೂ ಹೋರಾಟ ಮಾಡುತ್ತೇನೆ ಎಂಬುದಾಗಿ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ : ಮರಿಪೋಲ್ ಜನರು ನಿರಾಳ..!

Sat Mar 5 , 2022
ಕಳೆದ ಹತ್ತು ದಿನದಿಂದ ಉಕ್ರೇನ್ ನಲ್ಲಿ ಗುಂಡು, ಬಾಂಬ್ ದೇ ಸದ್ದು ಕೇಳಿ ಜನ ಜೀವ ಕೈನಲ್ಲಿಡಿದುಕೊಂಡು ಬದುಕುತ್ತಿದ್ದರು. ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಭಾರತ ಸರ್ಕಾರ ಕೂಡ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನ ಕರೆತರಲು ಪ್ರಯತ್ನಗಳನ್ನ ಮಾಡ್ತಾ ಇದೆ. ಈ ಮಧ್ಯೆ ಸದ್ಯ ರಷ್ಯಾ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದೆ. ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಸ್ಥಳಾಂತರ ಮಾಡುವವರೆಗೂ ಕದನ ವಿರಾಮ ಘೋಷಿಸಿದೆ ಎನ್ನಲಾಗಿದೆ‌. ಆದ್ರೆ ರಷ್ಯಾ ಕದನ ವಿರಾಮ ಘೋಷಣೆಯಿಂದಾಗಿ ಮರಿಪೋಲ್ […]

Advertisement

Wordpress Social Share Plugin powered by Ultimatelysocial