ಮಾದಪ್ಪನ ಬೆಟ್ಟ ವಸತಿ ಗೃಹದಲ್ಲಿ 100 ಗ್ರಾಂ ಸರ ಬೀಳಿಸಿಕೊಂಡಿದ್ದ ಟೆಕ್ಕಿ ಪತ್ನಿ,ನೌಕರನ ಪ್ರಾಮಾಣಿಕತೆ!

ಚಾಮರಾಜನಗರ: ರಸ್ತೆಯಲ್ಲಿ 10 ರೂ. ಬಿದ್ದಿದ್ದರೇ ಎಗರಿಸುವ ಈ ದಿನಮಾನದಲ್ಲಿ ಬರೋಬ್ಬರಿ 100 ಗ್ರಾಂ ಚಿನ್ನದ ಸರವನ್ನು ಮರಳಿಸಿ ನೌಕರ ಪ್ರಾಮಾಣಿಕತೆ ಮೆರೆದಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ಮೈಸೂರಿನ ಸಾಫ್ಟ್‌ವೇರ್ ಎಂಜಿನಿಯರ್ ಎಂ.ರಾಜಶೇಖರ ಎಂಬವರ ಪತ್ನಿ ಸರವನ್ನು ಮರಳಿ ಪಡೆದಿದ್ದು ಪ್ರಾಧಿಕಾರದ ನೌಕರ ಕೃಷ್ಣಮೂರ್ತಿ ಮಾಂಗಲ್ಯ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕಳೆದ 3 ರಂದು ಬೆಟ್ಟಕ್ಕೆ ಬಂದಿದ್ದ ಟೆಕ್ಕಿ ಕುಟುಂಬ ಜೇನುಮಲೆ ವಸತಿಗೃಹದಲ್ಲಿ ತಂಗಿದ್ದರು‌.

ದೇವರ ದರ್ಶನ ಮುಗಿಸಿ ಕೊಠಡಿ ಖಾಲಿ ಮಾಡಿ ತೆರಳುವಾಗ ಮಾಂಗಲ್ಯ ಸರವನ್ನು ಬೀಳಿಸಿಕೊಂಡು ಹೋಗಿದ್ದಾರೆ‌‌. ಬಳಿಕ ಸರವು ರಿಸೆಪ್ಸೆನಿಸ್ಟ್ ಸಿಕ್ಕಿ ಕೊಠಡಿ ಕೊಡುವಾಗಿನ ನೀಡಿದ್ದ ದೂರವಾಣಿ ಸಂಪರ್ಕದಿಂದ ಟೆಕ್ಕಿಯನ್ನು ಪತ್ತೆಹಚ್ಚಿ ಮಾಂಗಲ್ಯ ಸರವನ್ನು ಹಿಂತಿರುಗಿಸಿದ್ದಾರೆ‌.

ಇನ್ನು, ನೌಕರನ ಪ್ರಾಮಾಣಿಕತೆಗೆ ಪ್ರಾಧಿಕಾರದಿಂದ ಶ್ಲಾಘನೆ, ಟೆಕ್ಕಿ ದಂಪತಿಯಿ‌ಂದ ಅಭಿನಂದನೆ ಸೃಷ್ಟಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೂಪರ್ಸ್ಟಾರ್ ಮಹೇಶ್ ಬಾಬು ಅವರ ಸರ್ಕಾರ ವಾರಿ ಪಾತ ತಂಡವು ಟ್ವಿಟರ್ ಎಮೋಜಿಯೊಂದಿಗೆ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ!

Thu May 5 , 2022
ಮಹೇಶ್ ಬಾಬು ಅಭಿನಯದ ಸರ್ಕಾರ ವಾರಿ ಪಟದ ತಯಾರಕರು ಪ್ರಿನ್ಸ್ ಅಭಿಮಾನಿಗಳಿಗಾಗಿ ವಿಶೇಷವಾದ ‘ಸರ್ಕಾರು ವಾರಿ ಸೂಪರ್ ಸರ್ಪ್ರೈಸ್’ ಅನ್ನು ಒಂದು ದಿನದ ಹಿಂದೆ ಅನಾವರಣಗೊಳಿಸಿದ್ದಾರೆ. ಪರಶುರಾಮ್ ನಿರ್ದೇಶನದ ತಂಡವು ಸರ್ಕಾರ ವಾರಿ ಪಟದ ಹೊಸ ಟ್ವಿಟ್ಟರ್ ಎಮೋಜಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸುತ್ತಿದ್ದಂತೆ ಎಲ್ಲರನ್ನೂ ಆಶ್ಚರ್ಯಗೊಳಿಸಿತು. ಇದು ಒಂದು ದಾಖಲೆಯನ್ನು ಮಾಡುವ ಮೂಲಕ,TFI ನಲ್ಲಿನ ಪ್ರಾದೇಶಿಕ ಚಲನಚಿತ್ರವು ವಿಶೇಷವಾದ ಎಮೋಜಿಯನ್ನು ಹೊಂದಿರುವುದು ಇದೇ ಮೊದಲು. ಈ ಹಿಂದೆ, ಕೆಜಿಎಫ್ 2, […]

Advertisement

Wordpress Social Share Plugin powered by Ultimatelysocial