ಬಸವೇಶ್ವರ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಬೈಕ್ ಸವಾರ ಬಿದ್ದು ಗಾಯ ಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಕಳೆದ ನಾಲ್ಕೈದು ತಿಂಗಳಿನಿAದ ಮೋಳೆ ನವಲಿಹಾಳ ರಸ್ತೆಯನ್ನು ಅಗೆದು ರಸ್ತೆ ಮಧ್ಯದಲ್ಲಿ ದೊಡ್ಡ ಗಾತ್ರದ ಪೈಪ್ಲೈನ್ ಕಾಮಗಾರಿ ನಡೆಯುತಿದೆ. ರಸ್ತೆ ಎರಡು ಬದಿಯಲ್ಲಿ ಯಾವುದೇ ತೆರನಾದ ಮುನ್ನೆಚ್ಚರಿಕೆ ಬೋರ್ಡಗಳನ್ನು ಹಾಕದೆ ಇರುವುದರಿಂದ ನವಲಿಹಾಳ ಕಡೆಯಿಂದ ಮೋಳೆ ಕಡೆಗೆ ಹೊರಟ ಅಶೋಕ ಹೊರಟ್ಟಿ ಎನ್ನುವುವರು ಪೈಪ್ಲೈನ್ ಕಾಮಗಾರಿಯಲ್ಲಿ ಬಿದ್ದಿದ್ದು, ಆತನಿಗೆ ಪೈಪ್ಲೈನ್ ಮೊಳೆಗಳು ಮೂಗಿಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ತಾಕಿದ್ದು, ಈತನನ್ನು ಆಂಬುಲೆನ್ಸ ಮೂಲಕ ತಾಲೂಕಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದರಿಂದ ಸ್ಥಳೀಯರು ನೀರಾವರಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಾವರಿ ಕಾಮಗಾರಿಯಲ್ಲಿ ಬಿದ್ದ ಬೈಕ್ ಸವಾರ
Please follow and like us: