ನೀರಾವರಿ ಕಾಮಗಾರಿಯಲ್ಲಿ ಬಿದ್ದ ಬೈಕ್ ಸವಾರ

ಬಸವೇಶ್ವರ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಬೈಕ್ ಸವಾರ ಬಿದ್ದು ಗಾಯ ಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಕಳೆದ ನಾಲ್ಕೈದು ತಿಂಗಳಿನಿAದ ಮೋಳೆ ನವಲಿಹಾಳ ರಸ್ತೆಯನ್ನು ಅಗೆದು ರಸ್ತೆ ಮಧ್ಯದಲ್ಲಿ ದೊಡ್ಡ ಗಾತ್ರದ ಪೈಪ್ಲೈನ್ ಕಾಮಗಾರಿ ನಡೆಯುತಿದೆ. ರಸ್ತೆ ಎರಡು ಬದಿಯಲ್ಲಿ ಯಾವುದೇ ತೆರನಾದ ಮುನ್ನೆಚ್ಚರಿಕೆ ಬೋರ್ಡಗಳನ್ನು ಹಾಕದೆ ಇರುವುದರಿಂದ ನವಲಿಹಾಳ ಕಡೆಯಿಂದ ಮೋಳೆ ಕಡೆಗೆ ಹೊರಟ ಅಶೋಕ ಹೊರಟ್ಟಿ ಎನ್ನುವುವರು ಪೈಪ್ಲೈನ್ ಕಾಮಗಾರಿಯಲ್ಲಿ ಬಿದ್ದಿದ್ದು, ಆತನಿಗೆ ಪೈಪ್ಲೈನ್ ಮೊಳೆಗಳು ಮೂಗಿಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ತಾಕಿದ್ದು, ಈತನನ್ನು ಆಂಬುಲೆನ್ಸ ಮೂಲಕ ತಾಲೂಕಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದರಿಂದ ಸ್ಥಳೀಯರು ನೀರಾವರಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಶಿಥಿಲಗೊಂಡ ಕೋಟೆಗೆ ಮರುಜೀವ

Wed Jun 24 , 2020
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪಡಕೋಟೆ ಐತಿಹಾಸಿಕವಾದ ಮಹತ್ವವುಳ್ಳ ಸ್ಥಳವಾಗಿದ್ದು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಊರು ತನ್ನದೆ ಆದ ಇತಿಹಾಸವನ್ನು ಹೊಂದಿದೆ.ಕೇವಲ ಐವತ್ತರಷ್ಟು ಮನೆಗಳಿದ್ದು ಇರುವ ಎಲ್ಲಾ ಮನೆಗಳು ಸುರಪುರ ಸಂಸ್ಥಾನದ ಅರಸರ ಕಾಲದಲ್ಲಿ ಮರಾಠ ಸೈನಿಕರ ವಂಶಸ್ಥರ ಮನೆಗಳಾಗಿವೆ.ಆದರೆ ಈಗ ಗ್ರಾಮದ ಸುತ್ತಲೂ ಇರುವ ಕೋಟೆಗಳು ಶಿಥಿಲಗೊಂಡು ಸಂಪೂರ್ಣ ಬೀಳುವ ಹಂತಕ್ಕೆ ತಲುಪಿವೆ. ಇದನ್ನು ಕಂಡ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡುಕೋಟೆ […]

Advertisement

Wordpress Social Share Plugin powered by Ultimatelysocial