ಕೆಲವು ದಿನಗಳ ಹಿಂದೆ ಹಿಂದು ದೇವರ ಬಗ್ಗೆ ಕೋಮು ಗಲಭೆ ಉಂಟು ಮಾಡುವ ಉದ್ದೇಶದಿಂದ ಹೇಳಿಕೆ ನೀಡಿರುವ ಮಾಜಿ ಸಚಿವ ಮುರಗೇಶ ನಿರಾಣಿಯವರ ವಿರುದ್ದ ದೂರು ಕೊಡಲು ಹೋದಾಗ ಸ್ಥಳಿಯ ನಗರ ಪಿಎಸ್ಐ ನಿರಾಕರಿಸುತ್ತಿದ್ದಾರೆ. ಗೋಕಾಕ ನಗರದ ನ್ಯಾಯವಾದಿಗಳಾದ ಬಸವರಾಜ ಕಾಪಸಿ ಇವರು ಪತ್ರಿಕಗೊಷ್ಟಿಯಲ್ಲಿ ಪೊಲೀಸ ಇಲಾಖೆಯ ವಿರುದ್ದ ತಮ್ಮ ಅಸಹಾಯಕತೆ ತೋರಿದ್ದಾರೆ. ಅದರಿಂದ ನೊಂದ ನ್ಯಾಯವಾದಿಗಳಾದ ಬಸವರಾಜ ಕಾಪಸಿಯವರು ಪೋಸ್ಟ್ ಮುಖಾಂತರ ದೂರು ನೀಡಿದ್ದಾರೆ, ಆದರೆ ನ್ಯಾಯವಾದಿಗಳ ಕಂಪ್ಲೆAಟ್ ತೆಗದುಕೊಳ್ಳದ ಈ ಪೋಲಿಸ್ ಅಧಿಕಾರಿ ಸಾರ್ವಜನಿಕರ ಪರಿಸ್ಥಿತಿ ಏನು ಎಂದು ತಮ್ಮ ಅಸಹಾಯಕತೆ ತೋರಿದ್ದಾರೆ. ಒಂದು ವೇಳೆ ಮುರಗೇಶ ನಿರಾಣಿಯವರ ಮೇ¯ ಕಂಪ್ಲೆAಟ್ ತೆಗೆದುಕೊಳ್ಳದೆ ಹೋದಲ್ಲಿ ಗೋಕಾಕ ನಗರ ಪೋಲಿಸ್ ಠಾಣೆಯ ಮುಂದೆ ಹೋರಾಟ ಮಾಡುವುದಾಗಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ನ್ಯಾಯವಾದಿಗಳ ದೂರು ತೆಗೆದುಕೊಳ್ಳದ ಪೋಲಿಸ್ ಅಧಿಕಾರಿ
Please follow and like us: