ಈ ವರ್ಷ ವಿಘ್ನನಿವಾರಕ ಗಣೇಶಮೂರ್ತಿ ತಯಾರಕರಿಗೂ ಕೊರೊನಾ ಬಿಸಿ ತಟ್ಟಿದೆ. ಗಣೇಶ ಚತುರ್ಥಿ ಹಿನ್ನಲೆ ಸಾವಿರಾರು ಮೂರ್ತಿ ತಯಾರಿಸಿದ್ದ ಕಲಾವಿದರ ಹೊಟ್ಟೆ ಮೇಲೆ ಕೊರೊನಾ ಬರೆ ಎಳೆದಿವೆ. ಕಳೆದ ಹತ್ತು ವರ್ಷಗಳಿಂದ ಕಲಬುರಗಿಯಲ್ಲಿ ರಾಜಸ್ಥಾನ ಮೂಲದ ಹಲವಾರು ಕಲಾವಿದರು ಗಣೇಶ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ. ನಗರದ ಬಿದ್ದಾಪುರ ಕಲೋನಿಯಲ್ಲಿ ಶೇಡ್ ಹಾಕಿಕೊಂಡು ವಾಸ ಮಾಡುತ್ತಿರೋ ಇವರು, ಸಾಲ ಮಾಡಿ ಲಕ್ಷಾಂತರ ರೊಪಾಯಿ ಬಂಡವಾಳ ಹಾಕಿ ಮೂರ್ತಿ ತಯಾರಿಸಿದ್ದಾರೆ. ಆದ್ರೆ ಕೊರೊನಾ ಹಿನ್ನಲೆ ಅದ್ಧೂರಿ ಹಬ್ಬದಾಚರಣೆ ಸರ್ಕಾರ ಬ್ರೇಕ್ ಹಾಕಿದೆ. ಜನರು ಗುಂಪು ಸೇರುವ ಹಿನ್ನಲೆ ಸಾರ್ವಜನಿಕ ಸ್ಧಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷಿದ್ಧವಾಗಿದೆ. ಹೀಗಾಗಿ ಬೃಹತ್ ಗಣೇಶ ಮೂರ್ತಿಗಳು ಸೇಲ್ ಆಗದೆ, ಕಲಾವಿದರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ.
ವಿಘ್ನನಿವಾರಕನಿಗೆ ವಿಘ್ನವಾದ ಕೊರೊನಾ
Please follow and like us: