ಎರಡು ದಿನಗಳ ಹಿಂದೆ ಗೋಕಾಕ ರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಮೂಡಲಗಿ ಪುರಸಭೆಯ ಸಿಬ್ಬಂದಿಯಾಗಿದ್ದು ಮೃತ ದೇಹವನ್ನು ಹೊರಗಡೆ ಇಟ್ಟಿದ್ದಾರೆ. ಮೃತ ದೇಹವನ್ನು ಬೇಗನೆ ಅಂತ್ಯ ಸಂಸ್ಕಾರ ಮಾಡದೆ ಬೇಕಾಬಿಟ್ಟಿಯಾಗಿ ಮುಂಜಾನೆ ೭ ಗಂಟೆಯಿಂದ ಹೊರಗಡೆ ಇಟ್ಟು ಇಲ್ಲಿನ ಸಿಬ್ಬಂದಿಗಳು ನರ್ಲಕ್ಷ್ಯ ತೋರುತ್ತಿದ್ದಾರೆ. ೩ ಆ್ಯಂಬುಲೆನ್ಸ್ ಇದ್ದರೂ ಸಹ ಮೃತ ದೇಹವನ್ನು ಮಧ್ಯಾನ್ಹದವರೆಗೆ ಹಾಗೆ ಇಟ್ಟಿದ್ದಾರೆ. ಅಲ್ಲದೆ ಗೋಕಾಕ ಕೋವಿಡ್ ಸೆಂಟರ್ ಗೆ ಸೋಂಕಿತ ವ್ಯಕ್ತಿಯ ಸಂಬಂದಿಕರು ಹೊರಗಿನಿಂದ ಬಂದು ಯಾವಾಗ ಬೇಕೋ ಆಗ ಸೋಂಕಿತರಿಗೆ ಊಟ ನೀಡುತಿದ್ದಾರೆ.
ಇತ್ತ ಸೋಂಕಿತರಿಗೆ ಹೊರಗಿನಿಂದ ಊಟ ನೀಡಬಾರದೆಂದು ಗೊತ್ತಿದ್ದರೂ ಸಹ ಇಲ್ಲಿನ ವೈದ್ಯರ ಬೇಜವಾಬ್ದಾರಿತನ ಎದ್ದುಕಾಣುತ್ತಲಿದೆ, ಇದಕ್ಕೆಲ್ಲಾ ಇಲ್ಲಿನ ಆರೋಗ್ಯ ಅಧಿಕಾರಿ ಡಾ: ಜಗದೀಶ ಜಿಂಗಿಯವರ ನರ್ಲಕ್ಷ್ಯವೆ ಕಾರಣ ಎಂದು ಎದ್ದು ಕಾಣುತ್ತಲಿದೆ.