ನಟ ಸುನಿಲ್ ಗ್ರೋವರ್​ಗೆ ಹೃದಯ ಸರ್ಜರಿ ̤

ಮುಂಬೈನ ಏಷ್ಯನ್ ಹಾರ್ಟ ಇನ್ಸ್ಟಿಟ್ಯೂಟ್ ​ಆಸ್ಪತ್ರೆಗೆ ಸುನಿಲ್​ ಅವರನ್ನು ಅಡ್ಮಿಟ್​ ಮಾಡಲಾಗಿದೆ ಎಂದು ವರದಿ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕ ಹೊರ ಹಾಕೋಕೆ ಆರಂಭಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು.ತಮ್ಮ ಹಾಸ್ಯ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರೆ ನಟ ಸುನಿಲ್​ ಗ್ರೋವರ್  ಬುಧವಾರ  ಫೆಬ್ರವರಿ 2  ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಸುನಿಲ್​ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು. ಈಗ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು   ಯಶಸ್ವಿಯಾಗಿ ನಡೆಸಿದ್ದಾರೆ. ಅವರು ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದು, ಇಂದು ಫೆಬ್ರವರಿ 3  ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಲಿದ್ದಾರೆ ಎಂದು ವರದಿ ಆಗಿದೆ. ಆತಂಕಗೊಂಡಿದ್ದ ಸುನಿಲ್​ ಗ್ರೋವರ್​ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ. ಹಾಸ್ಯ ಪಾತ್ರದ ಮೂಲಕ ​ ಅವರು ಸಾಖಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ.ಮುಂಬೈನ ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ ​ಆಸ್ಪತ್ರೆಗೆ ಸುನಿಲ್​ ಅವರನ್ನು ಅಡ್ಮಿಟ್​ ಮಾಡಲಾಗಿದೆ ಎಂದು ವರದಿ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕ ಹೊರ ಹಾಕೋಕೆ ಆರಂಭಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು. ಅಭಿಮಾನಿಗಳ ಪ್ರಾರ್ಥನೆ ಈಡೇರಿದೆ. ಅವರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ.ಈ ಬಗ್ಗೆ ಎಎನ್​ಐ ಟ್ವೀಟ್​ ಮಾಡಿದೆ. ‘ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಹಾಸ್ಯ ನಟ ಸುನಿಲ್ ಗ್ರೋವರ್ ಅವರು ಇಂದು ಮುಂಬೈನ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ’ ಎಂಬುದಾಗಿ ಎಎನ್​ಐ ವರದಿ​ ಮಾಡಿದೆ.ಹಿರಿಯ ನಟಿ ಸಿಮಿ ಗ್ರೆವಾಲ್ ಅವರು ಸುನಿಲ್​ಗೆ ಹೃದಯ ಸಮಸ್ಯೆ ಆಗಿದೆ ಎಂಬುದನ್ನು ಬರೆದುಕೊಂಡಿದ್ದರು. ‘ಸುನಿಲ್​ ಗ್ರೋವರ್​ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವ ವಿಚಾರ ನಿಜಕ್ಕೂ ಶಾಕಿಂಗ್​ ಆಗಿದೆ. ಅವರು ನಮ್ಮನ್ನು ನಗಿಸಿದ್ದರು. ಈಗ ಅವರಿಗೇ ಹೃದಯ ಸಮಸ್ಯೆ ಕಾಡಿದೆ. ಅವರು ಬೇಗ ಗುಣಮುಖರಾಗಲಿ ಎಂದು ನಾನು ಕೋರಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ಈ ವಿಚಾರ ಹರಡುತ್ತಿದ್ದಂತೆ ಅಭಿಮಾನಿಗಳ ವಲಯದಲ್ಲಿ ಆತಂಕ ಎದುರಾಗಿತ್ತು. ಆದರೆ, ಈಗ ಆತಂಕ ದೂರವಾಗುವ ಸುದ್ದಿ ಹೊರ ಬಿದ್ದಿದೆ.’ದಿ ಕಪಿಲ್​ ಶರ್ಮಾ ಶೋ’ ಮೂಲಕ ಹೆಚ್ಚು ಗುರುತಿಸಿಕೊಂಡವರು ಸುನಿಲ್​ ಗ್ರೋವರ್. ಗುಲಾಟಿ ಹಾಗೂ ಮಷೂರ್​ ಗುಲಾಟಿ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡರು. ಆದರೆ, ಸುನಿಲ್​ ಹಾಗೂ ಕಪಿಲ್​ ನಡುವೆ ಮನಸ್ತಾಪ ಮೂಡಿತು. ಹೀಗಾಗಿ, ಇಬ್ಬರೂ ಬೇರೆ ಆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಕೊರಿಯಾ ಬಿಟ್ರೆ ಪ್ರಪಂಚದ ಯಾವುದೇ ದೇಶದಲ್ಲಿ ಇಷ್ಟು ದರಿದ್ರವಾದ ಕೆಲಸಗಳು ಸಿಗುವುದಿಲ್ಲ

Thu Feb 3 , 2022
ಉತ್ತರ ಕೊರಿಯಾ(North Korea) ಈ ದುರಾದೃಷ್ಟ ದೇಶದ(Country) ಹೆಸರು ಕೇಳಿದ್ರೆ ಎಲ್ಲರಿಗೆ ಮೊದಲು ನೆನಪಿಗೆ ಬರೋದು ಅಲ್ಲಿನ ಹುಚ್ಚು ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್(Kim Jong Un)​.ಆನೆ(Elephant) ನಡೆದಿದ್ದೆ ದಾರಿ ಎನ್ನುವಂತೆ,ತಾನು ಮಾಡಿದ್ದೇ ಕಾನೂನು(Law) ತಾನು ನಡೆದಿದ್ದೇ ದಾರಿ(Road) ಎನ್ನೂವ ಕಿಮ್​, ತನ್ನ ದೇಶದಲ್ಲಿ ಯಾರೂ ಕೂಡ ತಾನು ವಿಧಿಸಿದ ನಿಯಮಗಳನ್ನ(Rules) ಮೀರಿ ನಡೆಯಬಾರದು ಎಂದು ಬಯಸುತ್ತಾನೆ. ತನಗೆ ಬೇಕಾದ ಚಿತ್ರ ವಿಚಿತ್ರ ಕಾನೂನುಗಳನ್ನ ಜಾರಿಗೆ ತರುವ ಕಿಮ್​ ತಾನು […]

Advertisement

Wordpress Social Share Plugin powered by Ultimatelysocial