ಪೆತಟ್ರೋಲ್, ಡೀಸೇಲ್ ಬೆಲೆ ಏರಿಕೆ ಖಂಡಿಸಿ,ಪ್ರತಿಭಟನೆ

ಪೆತಟ್ರೋಲ್, ಡೀಸೇಲ್ ಬೆಲೆ ಏರಿಕೆ ಖಂಡಿಸಿ, ದೇವದುರ್ಗದಲ್ಲಿ ಪ್ರತಿಭಟನೆ ನಡೆಸಲಾಯ್ತು. ದೇವದುರ್ಗ ತಾಲೂಕಿನ ಜಾಲಹಳ್ಳಿ ಅಂಬೇಡ್ಕರ್ ಪ್ರತಿಮೆ ಬಳಿ ನರೇಂದ್ರ ಮೋದಿ ಅವರ ಪರಕೃತಿ ದಹನ ಸುಡುವ ಮೂಲಕ ಸಿಪಿಐಎಂನಿAದ ಪ್ರತಿಭಟನೆ ಮಾಡಲಾಯಿತು. ದೇಶದ ಜನತೆ ಕೊರೊನಾದಿಂದ ತತ್ತರಿಸಿ ಹೋಗಿದೆ, ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರೋದು ಖಂಡನೀಯ ಎಂದು ತಾಲೂಕು ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಹೇಳಿದ್ದಾರೆ. ತಕ್ಷಣವೇ ಪೆಟ್ರೋಲ್ ಡೀಸೆಲ್ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತ ಮಾಡಬೇಕು ಮತ್ತು ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಕೂಡಲೇ ಇಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಾಲಹಳ್ಳಿ ಮುಖಂಡರಾದ ನರಸಣ್ಣ ನಾಯಕ್, ಮೌನೇಶ ದಾಸರ್, ಗುರು ನಾಯಕ, ಹನುಮಂತ ಮಡಿವಾಳ, ಮುಕ್ತ ಪಾಷಾ, ರಂಗನಾಥ್ ನಾಯಕ ,ಚಂದ್ರಶೇಖರ ಲಿಂಗದಹಳ್ಳಿ ಮತ್ತಿತರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಕೊರೊನಾ ನಿರ್ವಹಣೆಯ ಕಿಂಗ್ -ಸಚಿವ ಸುಧಾಕರ್

Tue Jun 30 , 2020
ಜುಲೈ ತಿಂಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತೆ ಅಂತಾ ಮೊದಲೇ ಹೇಳಿದ್ದೆ. ಕೊರೊನಾ ಟೆಸ್ಟ್ಗಾಗಿ ಈಗ ೮೦ ಲ್ಯಾಬ್ ಗಳನ್ನು ತೆರೆಯಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಮೊದಲೇ ಸಭೆಯಲ್ಲಿ ಲ್ಯಾಬ್ ತೆರೆಯುವಂತೆ ಸೂಚಿಸಲಾಗಿತ್ತು. ಈಗ ೮೦ ಲ್ಯಾಬ್ ಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ ಎರಡು ಇದ್ದ ಲ್ಯಾಬ್‌ಗಳನ್ನು ೮೦ಕ್ಕೆ ಏರಿಸಲಾಗಿದೆ. ಇದೇ ವೇಳೆ ಬೆಂಗಳೂರು ಕೊರೊನಾ ನಿರ್ವಹಣಾ ಉಸ್ತುವಾರಿ ಯಾರು ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಸಿದ […]

Advertisement

Wordpress Social Share Plugin powered by Ultimatelysocial