ಪೆತಟ್ರೋಲ್, ಡೀಸೇಲ್ ಬೆಲೆ ಏರಿಕೆ ಖಂಡಿಸಿ, ದೇವದುರ್ಗದಲ್ಲಿ ಪ್ರತಿಭಟನೆ ನಡೆಸಲಾಯ್ತು. ದೇವದುರ್ಗ ತಾಲೂಕಿನ ಜಾಲಹಳ್ಳಿ ಅಂಬೇಡ್ಕರ್ ಪ್ರತಿಮೆ ಬಳಿ ನರೇಂದ್ರ ಮೋದಿ ಅವರ ಪರಕೃತಿ ದಹನ ಸುಡುವ ಮೂಲಕ ಸಿಪಿಐಎಂನಿAದ ಪ್ರತಿಭಟನೆ ಮಾಡಲಾಯಿತು. ದೇಶದ ಜನತೆ ಕೊರೊನಾದಿಂದ ತತ್ತರಿಸಿ ಹೋಗಿದೆ, ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರೋದು ಖಂಡನೀಯ ಎಂದು ತಾಲೂಕು ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಹೇಳಿದ್ದಾರೆ. ತಕ್ಷಣವೇ ಪೆಟ್ರೋಲ್ ಡೀಸೆಲ್ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತ ಮಾಡಬೇಕು ಮತ್ತು ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಕೂಡಲೇ ಇಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಾಲಹಳ್ಳಿ ಮುಖಂಡರಾದ ನರಸಣ್ಣ ನಾಯಕ್, ಮೌನೇಶ ದಾಸರ್, ಗುರು ನಾಯಕ, ಹನುಮಂತ ಮಡಿವಾಳ, ಮುಕ್ತ ಪಾಷಾ, ರಂಗನಾಥ್ ನಾಯಕ ,ಚಂದ್ರಶೇಖರ ಲಿಂಗದಹಳ್ಳಿ ಮತ್ತಿತರು ಉಪಸ್ಥಿತರಿದ್ದರು.
ಪೆತಟ್ರೋಲ್, ಡೀಸೇಲ್ ಬೆಲೆ ಏರಿಕೆ ಖಂಡಿಸಿ,ಪ್ರತಿಭಟನೆ
Please follow and like us: