ಬಾಲಿವುಡ್ನ ಖ್ಯಾತ ನಟ ರಂಜನ್ ಸೆಹವಾಲ್ ಅವರು ಇಂದು ನಿಧನರಾಗಿದ್ದಾರೆ. ಸರ್ಬಜಿತ್ ಸಿನಿಮಾ ಮೂಲಕ ಉತ್ತಮ ಹೆಸರನ್ನು ಮಾಡಿದ್ದ ಅವರು ಬಹುಅಂಗAಗ ವೈಫಲ್ಯದಿಂದ ಬಳಲುತ್ತಾಯಿದ್ರು ಎಂದು ಹೇಳಲಾಗ್ತಾಯಿದೆ. ಪಂಜಾಬಿಯ ಹಲವು ಚಿತ್ರಗಳಲ್ಲಿ ನಟಿಸಿದ್ದ ರಂಜನ್ಗೆ ೨೦೧೭ರಲ್ಲಿ ಬಿಡುಗಡೆಯಾಗಿದ್ದ ‘ಮಾಹಿ ಎನ್ಆರ್ಐ ಮತ್ತು ೨೦೧೪ರಲ್ಲಿ ತೆರೆಕಂಡಿದ್ದ ‘ಯಾರ್ ದಾ ಕ್ಯಾಚಪ್’ ಹೆಸರು ತಂದು ಕೊಟ್ಟಿದ್ದವು.ಪಂಜಾಬ್ ಮೂಲದವರಾದ ರಂಜನ್ ಚಂಡೀಗಢನಲ್ಲಿ ವಾಸವಾಗಿದ್ದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಥಿಯಟರ್ ಸ್ಟಡಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡು ಮುಂಬೈಗೆ ಬಂದಿದ್ದರು. ರಿಶ ತೋ ಸೇ ಬಡಿ ಪ್ರಥಾ, ತುಮ್ ದೇನಾ ಸಾಥ್ ಮೇರಾ ಧಾರವಾಹಿಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ತದನಂತರ ಕ್ರೈಂ ಪೆಟ್ರೋಲ್ ಮತ್ತು ಸಾವಧಾನ್ ಇಂಡಿಯಾ ಸಂಚಿಕೆಗಳಲ್ಲಿ ರಂಜನ್ ನಟಿಸಿದ್ದರು.
ಬಾಲಿವುಡ್ನ ಖ್ಯಾತ ನಟ ರಂಜನ್ ನಿಧನ
Please follow and like us: