ಯಡಿಯೂರಪ್ಪ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.ಸುದ್ದಗೋಷ್ಟಿಯಲ್ಲಿ ಮತನಾಡಿದ ಅವರು, ಜನರಿಗೆ ಯಡಿಯೂರಪ್ಪ ಅವರು ಉತ್ತರದಾಯಿತ್ವ ಆಗಿದ್ದಾರೆ. ಯಾರಾದ್ರು ಒಬ್ಬರು ಡಾಕ್ಟರ್ನಲ್ಲಿ ಕಾನ್ಫಿಡೆನ್ಸ್ ಕ್ರಿಯೇಟ್ ಮಾಡುವುದಕ್ಕೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೀರಾ. ದುಡ್ಡು ಲೂಟಿ ಮಾಡಲು ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಜನರ ಪ್ರಾಣ ಉಳಿಸಬೇಕಿರುವುದು ರಾಜ್ಯ , ಕೇಂದ್ರ ಸರ್ಕಾರಗಳು. ದೇಶದ ಗಡಿ ಉಳಿಸುವುದಕ್ಕೆ ಮೋದಿ ಕೈನಲ್ಲಿ ಆಗಿಲ್ಲ. ಆರಂಭ ಶೂರತ್ವ ಇದ್ರೆ ಅದು ಬಿಜೆಪಿ ಮಾತ್ರ .ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಮಾಡ್ರಿ. ಯಾರು ಮೃತಪಡುತ್ತಾರೆ ಅವರನ್ನು ಸರಿಯಾಗಿ ಮಣ್ಣು ಮಾಡುವ ವ್ಯವಸ್ಥೆ ಮಾಡಿ. ಹೈ ಕೋರ್ಟ್ ಸಿಟಿಂಗ್ ಜೆಡ್ಜ್ ಅವರಿಂದ ಈ ಹಗರಣವನ್ನು ತನಿಖೆಗೆ ಒಳಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್ವೈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ
Please follow and like us: