ಕೊರೊನಾ ಮಹಾಮಾರಿ ಇಂದ ಇಡೀ ದೇಶವೇ ಸ್ತಬ್ಧವಾಗಿದೆ ಎಂದು ಜೆಡಿಯು ರಾಜ್ಯಧ್ಯಕ್ಷ ಮಹೀಮಾ ಪಟೇಲ್ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಅವರು, ಕೊರೊನಾದಿಂದ ಬಡ ಜನರಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಖಾಸಗಿ ಒಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ತೀರ ಕಷ್ಟ ಎದುರಾಗಿದೆ. ಸುಮಾರು ೩೫ ಸಾವಿರ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಖಾಸಗಿ ಶಿಕ್ಷಕರಿಗೆ ಸರ್ಕಾರ ಸಹಾಯ ಮಾಡಬೇಕು.ನೊಂದ ಶಿಕ್ಷಕರಿಗೆ ಸರ್ಕಾರ ೫೦ ಕೊಟಿ ಅನುದಾನ ನೀಡಬೇಕು. ಇನ್ನು ಕಲಾವಿದರಗೆ ೨೦ ಕೋಟಿ ಅನುದಾನ ಸರ್ಕಾರ ಬೀಡುಗಡೆ ಮಾಡಬೇಕು. ಆ ನಿಟ್ಟಿನಲ್ಲಿ ಇಂದು ನಾವು ಸಿಎಂ ಯಡಿಯೂರಪ್ಪ ಗೆ ಮನವಿ ಪತ್ರ ನೀಡಿದೇವೆ. ಇದರ ಕಡೆ ನಾನು ಗಮನ ಹರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ನಾವು ರ್ಯಾಲಿ ಮಾಡಿದ್ದು ತಪ್ಪು ಎಂದು ಜೆಡಿಯು ರಾಜ್ಯಧ್ಯಕ್ಷ ತಪ್ಪೊಪ್ಪಿಕೊಂಡರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಾವು ಸಿಎಂ ಭೇಟಿಗೆ ಮೂರು ನಾಲ್ಕು ಜನರು ಮಾತ್ರ ಬರೊಣ ಎಂದಿದ್ವಿ. ಆದ್ರೆ ಸ್ವಲ್ಪ ಕಾರ್ಯಕರ್ತರು ಹೆಚ್ಚಾಗಿದ್ದಾರೆ. ನಮ್ಮಿಂದ ಪೋಲೀಸ್ರಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು.
ಕೊರೊನಾದಿಂದ ಜನರಿಗೆ ಸಮಸ್ಯೆಗಳಾಗಿವೆ- ಮಹೀಮಾ ಪಟೇಲ್
Please follow and like us: