ಕೊರೊನಾದಿಂದ ಜನರಿಗೆ ಸಮಸ್ಯೆಗಳಾಗಿವೆ- ಮಹೀಮಾ ಪಟೇಲ್

ಕೊರೊನಾ ಮಹಾಮಾರಿ ಇಂದ ಇಡೀ ದೇಶವೇ ಸ್ತಬ್ಧವಾಗಿದೆ ಎಂದು ಜೆಡಿಯು ರಾಜ್ಯಧ್ಯಕ್ಷ ಮಹೀಮಾ ಪಟೇಲ್ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಅವರು, ಕೊರೊನಾದಿಂದ ಬಡ ಜನರಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಖಾಸಗಿ ಒಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ತೀರ ಕಷ್ಟ ಎದುರಾಗಿದೆ. ಸುಮಾರು ೩೫ ಸಾವಿರ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಖಾಸಗಿ ಶಿಕ್ಷಕರಿಗೆ ಸರ್ಕಾರ ಸಹಾಯ ಮಾಡಬೇಕು.ನೊಂದ ಶಿಕ್ಷಕರಿಗೆ ಸರ್ಕಾರ ೫೦ ಕೊಟಿ ಅನುದಾನ ನೀಡಬೇಕು. ಇನ್ನು ಕಲಾವಿದರಗೆ ೨೦ ಕೋಟಿ ಅನುದಾನ ಸರ್ಕಾರ ಬೀಡುಗಡೆ ಮಾಡಬೇಕು. ಆ ನಿಟ್ಟಿನಲ್ಲಿ ಇಂದು ನಾವು ಸಿಎಂ ಯಡಿಯೂರಪ್ಪ ಗೆ ಮನವಿ ಪತ್ರ ನೀಡಿದೇವೆ. ಇದರ ಕಡೆ ನಾನು ಗಮನ ಹರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ನಾವು ರ್ಯಾಲಿ ಮಾಡಿದ್ದು ತಪ್ಪು ಎಂದು ಜೆಡಿಯು ರಾಜ್ಯಧ್ಯಕ್ಷ ತಪ್ಪೊಪ್ಪಿಕೊಂಡರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಾವು ಸಿಎಂ ಭೇಟಿಗೆ ಮೂರು ನಾಲ್ಕು ಜನರು ಮಾತ್ರ ಬರೊಣ ಎಂದಿದ್ವಿ. ಆದ್ರೆ ಸ್ವಲ್ಪ ಕಾರ್ಯಕರ್ತರು ಹೆಚ್ಚಾಗಿದ್ದಾರೆ. ನಮ್ಮಿಂದ ಪೋಲೀಸ್‌ರಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ-ಸಲಿಂ ಅಹಮ್ಮದ್

Mon Jul 6 , 2020
ಕಾಂಗ್ರೆಸ್ ಪದಾಧಿಕಾರಿ ನೇಮಕದ ಬಗ್ಗೆ ಇನ್ನು ಯಾವುದೇ ಚರ್ಚೆ ನಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹಮ್ಮದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೆ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾಗ ಇದ್ದ ಪದಾಧಿಕಾರಿಗಳೇ ಇದ್ದಾರೆ. ನೋಡಬೇಕು ಏನ ಚರ್ಚೆ ಆಗುತ್ತೆ ಅಂತಾ. ಇನ್ನೂ ಯುತ್ ಕಾಂಗ್ರೆಸ್ ಅಧ್ಯಕ್ಷ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಕೂಡ ಯಾವುದೇ ನಿರ್ಧಾರ ಮಾಡಿಲ್ಲ. ಹಲವು ಆಕಾಂಕ್ಷಿಗಳು ಇದ್ದಾರೆ ಆದ್ರೆ ಎಲ್ಲರ ಅಭಿಪ್ರಾಯ ಪಡೆಯಬೇಕು. ನೋಡೊಣ […]

Advertisement

Wordpress Social Share Plugin powered by Ultimatelysocial