ಬೆಂಗಳೂರಿನ ವ್ಯಾಪಾರಿಗಳಿಂದ ಲಾಕ್ಡೌನ್

ದಿನೇ ದಿನೇ ಬೆಂಗಳೂರು ಮಹಾನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೆಲವು ಏರಿಯಾಗಳು ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಿಕೊಳ್ಳಲು ಮುಂದಾಗಿವೆ.ಕೆAಗೇರಿ ಸಮಿಪ ಉಳ್ಳಾಲದ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ೧೫ ದಿನಗಳ ಕಾಲ ಲಾಕ್ಡೌನ್ ಅನ್ನ ಘೋಷಿಸಿಕೊಂಡಿದ್ದಾರೆ.”ನಮ್ಮ ಗ್ರಾಹಕರೇ ನಮಗೆ ಮುಖ್ಯ. ಅವರ ಆರೋಗ್ಯದ ಬಗ್ಗೆ ನಮಗೂ ಕಾಳಜಿ ಇದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ, ನಾವು ಚೈನ್ ಬ್ರೇಕ್ ಮಾಡಲು ಸುಮಾರು ಒಂದು ವಾರಗಳ ಕಾಲವಾದರೂ ಲಾಕ್‌ಡೌನ್ ಮಾಡುತ್ತೇವೆ” ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರು ನಗರದ ಬಸವನಗುಡಿ ಮತ್ತು ಮಲ್ಲೇಶ್ವರದಲ್ಲಿ ವ್ಯಾಪಾರಿಗಳು ಸ್ವಯಂ ಘೋಷಿತ ಲಾಕ್‌ಡೌನ್ ಮಾಡಿದ್ದರು. ಈಗ ಉಲ್ಲಾಳದಲ್ಲಿಯೂ ವ್ಯಾಪಾರಿಗಳು ಸ್ವಯಂ ಲಾಕ್‌ಡೌನ್ ಮೊರೆ ಹೋಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನದಿಂದ ಮತ್ತೆ ಅಪ್ರಚೋದಿತ ದಾಳಿ

Wed Jul 8 , 2020
ಜಮ್ಮು-ಕಾಶ್ಮೀರದ ಪೂಂಛ್ ವಲಯದ ಗಡಿಯಲ್ಲಿ ಪಾಕ್ ಸೇನಾಪಡೆ ಅಪ್ರಚೋದಿತ ಗುಂಡಿನ ಚಕಮಕಿ ನಡೆಸಿ ಜನವಸತಿ ಪ್ರದೇಶದ ಮೇಲೆ ಶೆಲ್ ದಾಳಿ ಮಾಡಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಡಿರೇಖೆಯ ಪೂಂಛ್‍ನ ಬಾಲಕೋಟ್ ಮತ್ತು ಮೆಂಧಾಲ್ ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿದೆ, ಮುಂಜಾನೆ ೨ ಗಂಟೆ ಸಂದರ್ಭದಲ್ಲಿ ಲಾನ್‍ಜೋಟಿ ಗ್ರಾಮದ ಮೇಲೆ ಪಾಕ್ ಪಡೆ ಉಡಾಯಿಸಿದ ಶೆಲ್ ಸ್ಫೋಟಗೊಂಡು ರೇಷಮ್‍ಬೀ (೬೩), ಹಕಮ್‍ಬೀ ಎಂಬ […]

Advertisement

Wordpress Social Share Plugin powered by Ultimatelysocial