ದಿನೇ ದಿನೇ ಬೆಂಗಳೂರು ಮಹಾನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೆಲವು ಏರಿಯಾಗಳು ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಿಕೊಳ್ಳಲು ಮುಂದಾಗಿವೆ.ಕೆAಗೇರಿ ಸಮಿಪ ಉಳ್ಳಾಲದ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ೧೫ ದಿನಗಳ ಕಾಲ ಲಾಕ್ಡೌನ್ ಅನ್ನ ಘೋಷಿಸಿಕೊಂಡಿದ್ದಾರೆ.”ನಮ್ಮ ಗ್ರಾಹಕರೇ ನಮಗೆ ಮುಖ್ಯ. ಅವರ ಆರೋಗ್ಯದ ಬಗ್ಗೆ ನಮಗೂ ಕಾಳಜಿ ಇದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ, ನಾವು ಚೈನ್ ಬ್ರೇಕ್ ಮಾಡಲು ಸುಮಾರು ಒಂದು ವಾರಗಳ ಕಾಲವಾದರೂ ಲಾಕ್ಡೌನ್ ಮಾಡುತ್ತೇವೆ” ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರು ನಗರದ ಬಸವನಗುಡಿ ಮತ್ತು ಮಲ್ಲೇಶ್ವರದಲ್ಲಿ ವ್ಯಾಪಾರಿಗಳು ಸ್ವಯಂ ಘೋಷಿತ ಲಾಕ್ಡೌನ್ ಮಾಡಿದ್ದರು. ಈಗ ಉಲ್ಲಾಳದಲ್ಲಿಯೂ ವ್ಯಾಪಾರಿಗಳು ಸ್ವಯಂ ಲಾಕ್ಡೌನ್ ಮೊರೆ ಹೋಗಿದ್ದಾರೆ.
ಬೆಂಗಳೂರಿನ ವ್ಯಾಪಾರಿಗಳಿಂದ ಲಾಕ್ಡೌನ್
Please follow and like us: