ಮನದಾಳದ ಮಾತು – ವಿಚ್ಛೇದನದ ನಂತರ ಸ್ಯಾಮ್‌ ನ ಮೊದಲ ಮಾತು

ಮದುವೆ ನಂತರ ಜೀವನದಲ್ಲಿ ಬದಲಾವಣೆ ಸಹಜ ಹಾಗೇ ವಿಚ್ಛೇದನ ನಂತರವೂ ಬದಲಾವಣೆ ಕಂಡಿದ್ದಾರೆ ನಟಿ ಸಮಂತಾ. ನೆನ್ನೆ ಅಷ್ಟೇ ಸ್ಯಾಮ್‌  ಮತ್ತು ನಾಗ ಚೈತನ್ಯ ರವರ 4 ವರ್ಷಗಳ ದಾಂಪತ್ಯಕ್ಕೆ ಪುಲ್‌ ಸ್ಟಾಪ್‌ ನೀಡಿದ್ದಾರೆ.ಈ ವಿಷಯವನ್ನು ಸೋಶಿಯಲ್​ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ . ಇದಲ್ಲದೆ ಅಕ್ಟೋಬರ್​ 3 ರಂದು ಸಮಂತಾ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಪ್ರೊಪೈಲ್‌ ಹೆಸರು ಬದಲಿಸಿದ್ದಾರೆ. ಎಸ್ ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ.

ಈ ಇಬ್ಬರು ಸ್ಟಾರ್ಸ್‌ ವಿಚ್ಛೇದನ ವಿಚಾರ ಕೇಳಿ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರಿಟಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಇಬ್ಬರ ನಡುವಿನ ಬಿರುಕಿಗೆ ಕಾರಣವಾದ್ರು ಏನು ? ಎಂಬ ಪ್ರಶ್ನೆಗೆ ನಿಖರ ಸ್ಪಷ್ಟನೆ ಸಿಕ್ಕಿಲ್ಲ. ಹೀಗಿರುವಾಗಲೇ ಸ್ಯಾಮ್‌ ಪ್ರೊಪೈಲ್‌ ಹೆಸರು ಬದಲಿಸಿದಲ್ಲದೇ  ಹೊಸ ಪೋಸ್ಟ್​ ಒಂದನ್ನು ಕೂಡ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಂತರ ಅವರು ಹಾಕುತ್ತಿರುವ ಮೊದಲನೇಯ  ಪೋಸ್ಟ್ ಇದಾಗಿದೆ.

 

ವಿಮಾನದ ಕಿಟಕಿಯಿಂದ ಹೊರಗಿನ ಜಗತನ್ನು ಸಮಂತಾ ನೋಡುತ್ತಾ ,ಕೆಲ ಸಾಲುಗಳನ್ನು ತಮ್ಮ ಇನ್ಟಾ ಖಾತೆಯ ಸ್ಟೋರಿನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು..’ ಎಂಬ ಸಾಲಿನೊಂದಿಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿಟಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ಅಧ್ಯಕ್ಷ ಆನಂದ್ ಭಡೆ ಸಿಎಂ ಭೇಟಿ...!

Mon Oct 4 , 2021
ಬೆಂಗಳೂರು, ಅಕ್ಟೋಬರ್ 04 : ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ಅಧ್ಯಕ್ಷ ಆನಂದ್ ಭಡೆ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದರು.ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.   Please follow and like us:

Advertisement

Wordpress Social Share Plugin powered by Ultimatelysocial