ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಅತಿಹೆಚ್ಚು ರಿಟರ್ನ್‌ ಗಳಿಸಿ

ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಐದು ವರ್ಷಗಳಲ್ಲಿ ಅತಿಹೆಚ್ಚು ರಿಟರ್ನ್‌ ಗಳಿಸುವುದರಲ್ಲಿ ಎಸ್‌ಬಿಐನ ಎಸ್‌ಬಿಐ ಸ್ಮಾಲ್‌ ಕ್ಯಾಪ್‌ ಫಂಡ್‌ ಡೈರಕ್ಟ್‌ ಗ್ರೋತ್‌, ಎಸ್‌ಬಿಐ ಕಾಂಟ್ರಾ ಫಂಡ್‌ ಹಾಗೂ ಎಸ್‌ಬಿಐ ಟೆಕ್ನಾಲಜಿ ಅಪೊರ್ಚ್ಯುನಿಟೀಸ್‌ ಫಂಡ್‌ ಅತ್ಯುತ್ತಮ ಆಯ್ಕೆಯಾಗಿದೆ.

ವಾರ್ಷಿಕ ಈ ಫಂಡ್‌ಗಳು ಶೇ.23ರವರೆಗೆ ರಿಟರ್ನ್ಸ್‌ ನೀಡಬಹುದು. ಬೆಳವಣಿಗೆ ಆಧಾರಿತ ಈ ಎಲ್ಲ ಪ್ಲ್ಯಾನ್‌ಗಳು ಡೈರೆಕ್ಟ್‌ ಪ್ಲ್ಯಾನ್‌ಗಳಾಗಿವೆ.

ಎಸ್‌ಬಿಐನ ಟೆಕ್ನಾಲಜಿ ಅಪೊರ್ಚ್ಯುನಿಟೀಸ್‌ ಫಂಡ್‌: ಎಸ್‌ಬಿಐನ ಟೆಕ್ನಾಲಜಿ ಅಪೊರ್ಚ್ಯುನಿಟೀಸ್‌ ಫಂಡ್‌ನಡಿ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಆಧಾರಿತ ಕಂಪೆನಿಗಳಲ್ಲಿ ಇಕ್ವಿಟಿ ಮತ್ತು ಇಕ್ವಿಟಿಗೆ ಸಂಬಂಧಿಸಿತ ಪೋರ್ಟ್‌ಪೊಲಿಯೊ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರು ದೀರ್ಘಕಾಲಿಕ ಬಂಡವಾಳವನ್ನು ಗಳಿಸಬಹುದು.

ಐದು ವರ್ಷಗಳ ಹಿಂದೆ ಒಂದು ವೇಳೆ ನೀವು ಎಸ್‌ಬಿಐ ಟೆಕ್ನಾಲಜೀಸ್‌ ಅಪೊರ್ಚ್ಯುನಿಟೀಸ್‌ ಫಂಡ್‌ನಲ್ಲಿ ತಿಂಗಳಿಗೆ 12,000 ರೂ. ಹೂಡಿಕೆ ಮಾಡಿದ್ದರೆ, ನಿಮಗೆ ಶೇ.84.47ರಷ್ಟು ರಿಟರ್ನ್ಸ್‌ ಅಥವಾ ಆದಾಯ ಪಡೆಯಬಹುದು. ಅಂದರೆ ಒಟ್ಟು ಐದು ವರ್ಷಗಳಲ್ಲಿ 7.7 ಲಕ್ಷವನ್ನು ಹೂಡಿಕೆ ಮಾಡಿ 13.3 ಲಕ್ಷ ರೂ. ಹಣವನ್ನು ವಾಪಾಸ್‌ ಪಡೆಯಬಹುದು.

ಎಸ್‌ಬಿಐ ಕಾಂಟ್ರಾ ಇಕ್ವಿಟಿ: ಎಸ್‌ಬಿಐ ಕಾಂಟ್ರಾ ಇಕ್ವಿಟಿ ಮ್ಯೂಚುವಲ್‌ ಫಂಡ್‌ ಯೋಜನೆಯಲ್ಲಿಯೂ ಸಕ್ರಿಯ ಹೂಡಿಕೆ ನಿರ್ವಹಣೆ ಹಾಗೂ ವಿಭಿನ್ನವಾದ ಹೂಡಿಕೆ ಮನೋಭಾವದ ಮೂಲಕ ದೀರ್ಘಕಾಲಿಕ ಬಂಡವಾಳ ನಿರೀಕ್ಷಿಸಬಹುದು.

ಎಸ್‌ಬಿಐ ಕಾಂಟ್ರಾ ಫಂಡ್‌ ಖಂಡಿತವಾಗಿಯೂ ಶೇ.95.16ರಷ್ಟು ರಿಟರ್ನ್ಸ್‌ ನೀಡಬಲ್ಲದು. ಅಂದರೆ, ಐದು ವರ್ಷಗಳ ಅವಧಿಯಲ್ಲಿ ವಾರ್ಷಿಕ 14.3ರಷ್ಟು ರಿಟರ್ನ್ಸ್‌ ಕೊಡುತ್ತದೆ. ಇದರಲ್ಲಿನ ವಾರ್ಷಿಕ ಆದಾಯವು ಶೇ.11.69 ಬೆಂಚ್‌ಮಾರ್ಕ್‌ ರಿಟರ್ನ್ಸ್‌ ಮತ್ತು ಶೇ.13.85ರಷ್ಟು ಕೆಟಗರಿ ಸರಾಸರಿಗಿಂತ ಹೆಚ್ಚಾಗಿರುತ್ತದೆ.

ಪ್ರಸ್ತುತ ಕಂಪೆನಿಯ ನಿವ್ವಳ ಆಸ್ತಿ ಮೌಲ್ಯವು 241.69 ಕೋಟಿ ರೂ. ಆಗಿದೆ. ಒಂದುವೇಳೆ ಐದು ವರ್ಷದ ಹಿಂದೆ ಎಸ್‌ಬಿಐ ಕಾಂಟ್ರಾ ಫಂಡ್‌ನಲ್ಲಿ ಪ್ರತಿ ತಿಂಗಳು 12000 ರೂ.ನಂತೆ ಹೂಡಿಕೆ ಮಾಡಿದ್ದರೆ 79.31ರಷ್ಟು ರಿಟರ್ನ್ಸ್‌ ಆದಾಯ ಪಡೆಯಬಹುದು. ಅಂದರೆ, ಐದು ವರ್ಷಗಳಲ್ಲಿ ಒಟ್ಟು 7.2 ಲಕ್ಷ ರೂ. ಹೂಡಿಕೆ ಮಾಡಿ 12.9 ಲಕ್ಷ ಹಣ ಗಳಿಸಬಹುದು.

ಎಸ್‌ಬಿಐ ಸಣ್ಣ ಕ್ಯಾಪ್‌ ಫಂಡ್‌: ಇನ್ನು ಎಸ್‌ಬಿಐ ಸಣ್ಣ ಕ್ಯಾಪ್‌ ಫಂಡ್‌ ಪ್ರಾಥಮಿಕವಾಗಿ ಸಣ್ಣ ಸಂಸ್ಥೆಗಳ ಈಕ್ವಿಟಿ ಸ್ಟಾಕ್‌ ಹೂಡಿಕೆಯಾಗಿದ್ದು, ಹೂಡಿಕೆದಾರರಿಗೆ ದೀರ್ಘಕಾಲಿಕ ಬಂಡವಾಳ ಬೆಳವಣಿಗೆಗೆ ಅವಕಾಶವನ್ನು ಮಾಡಿಕೊಡುತ್ತದೆ. ಇದು ಕೂಡ ಖಚಿತವಾಗಿ ಶೇ.84.28 ಆದಾಯವನ್ನು ನೀಡಲಿದ್ದು, ಐದು ವರ್ಷಗಳ ಅವಧಿಯಲ್ಲಿ ವಾರ್ಷಿಕವಾಗಿ 14.29ರಷ್ಟು ರಿಟರ್ನ್ಸ್‌ ನೀಡುತ್ತದೆ. ಪ್ರಸ್ತುತ ಇದರ ಆಸ್ತಿ ಮೌಲ್ಯವು 124.7 ಕೋಟಿ ರೂ. ಆಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಟಿಕೆಟ್ ಹಂಚಿಕೆಯಲ್ಲಿ ಗೊಂದಲದ ಗೂಡಾಗುತ್ತಿರುವ ಜೆಡಿಎಸ್,

Tue Feb 14 , 2023
ಮುಂಬರುವ ವಿಧಾನಸಬೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಸನ: ಮುಂಬರುವ ವಿಧಾನಸಬೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟಿಕೆಟ ಹಂಚಿಕೆಯಲ್ಲಿ ಎಲ್ಲಾ ಸಾಧ್ಯತೆ-ಭಾದ್ಯತೆಗಳನ್ನು ಲೆಕ್ಕಾಚಾರ ಮಾಡುತ್ತಿರುವ ಜೆಡಿಎಸ್ ಭವಾನಿ ರೇವಣ್ಣ ಅವರನ್ನು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದಿಂದ ಕಣಕ್ಕಿಳಿಸಲು ಯೋಜಿಸುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ರೇವಣ್ಣ ಅವರ ಪತ್ನಿ […]

Advertisement

Wordpress Social Share Plugin powered by Ultimatelysocial