ರಾಜ್ಯದಲ್ಲಿ ಕರ್ಫ್ಯೂ ಜಾರಿ-ಸಚಿವ ಬಸವರಾಜ್ ಬೊಮ್ಮಾಯಿ

ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನಲೆ, ಇಂದಿನಿಂದ ರಾಜ್ಯದಲ್ಲಿ ರಾತ್ರಿ ೮ ರಿಂದ ಬೆಳಗ್ಗೆ ೫ ರವರೆಗೆ ರ‍್ಫ್ಯೂ ಜಾರಿಗೊಳಿಸಲಾಗುತ್ತಿದೆ.
ಈ ಹಿಂದೆ ರಾತ್ರಿ ೯ರಿಂದ ಬೆಳಗ್ಗೆ ೭ರವರೆಗೆ ರ‍್ಫ್ಯೂ ವಿಧಿಸಲಾಗಿತ್ತು. ಆದರೆ ರ‍್ಫ್ಯೂ ನಡುವೆಯೂ ವಾಹನ ಸಂಚಾರ,ಅಂಗಡಿ ಮುಗಟ್ಟುಗಳು ತೆರೆದಿರುವುದು,ಜನರ ಓಡಾಟದ ಕಾರಣ ಅದು ಅಷ್ಟಾಗಿ ಪರಿಣಾಮಕಾರಿ ಆಗಲಿಲ್ಲ. ಕಳೆದ ಎರಡು ವಾರಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ಇಂದಿನಿಂದ ಕಟ್ಟುನಿಟ್ಟಾಗಿ ರ‍್ಫ್ಯೂ ಜಾರಿಯಾಗಲಿದೆ. ಈ ವೇಳೆಯಲ್ಲಿ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಬೇರೆ ಯಾವ ಚಟುವಟಿಕೆಗಳಿಗೂ ಅವಕಾಶ ಇರುವುದಿಲ್ಲ. ಇನ್ನು ಈ ಸಂರ‍್ಭದಲ್ಲಿ ಜನಸಾಮನ್ಯರು ಅನಗತ್ಯವಾಗಿ ಓಡಾಡುವುದು,ಮಾಸ್ಕ್ ಧರಿಸದೇ ಇರುವುದು, ಸೋಂಕು ಇದ್ದರೂ ಓಡಾಡುವುದು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಾಯಕರಿಂದ ಸೈಕಲ್ ರ‍್ಯಾಲಿ ಪ್ರತಿಭಟನೆ

Mon Jun 29 , 2020
ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಹಿನ್ನಲೆ, ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಪೆಟ್ರೋಲ್,ಡೀಸೆಲ್ ದರ ಏರಿಕೆ ಖಂಡಿಸಿ ಕೇಂದ್ರ ರ‍್ಕಾರದ ವಿರುದ್ಧ ಸಿದ್ದರಾಮಯ್ಯ,ಡಿಕೆಶಿ ನೇತೃತ್ವದಲ್ಲಿ ಸೈಕಲ್ ಜಾಥಾ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಕಛೇರಿಯಿಂದ ಐಟಿ ಕಛೇರಿವರೆಗೆ ಸೈಕಲ್ ರಾಲಿ ನಡೆಸಿದರು. ಈ ಸಂರ‍್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಚ್ಚಾ ತೈಲ ಬೆಲೆ ೩೭ ಡಾಲರ್ ಇದ್ದರೂ,ಕೇಂದ್ರ ರ‍್ಕಾರ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ, ನನ್ನ ಪ್ರಕಾರ ಈಗ […]

Advertisement

Wordpress Social Share Plugin powered by Ultimatelysocial