ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನಲೆ, ಇಂದಿನಿಂದ ರಾಜ್ಯದಲ್ಲಿ ರಾತ್ರಿ ೮ ರಿಂದ ಬೆಳಗ್ಗೆ ೫ ರವರೆಗೆ ರ್ಫ್ಯೂ ಜಾರಿಗೊಳಿಸಲಾಗುತ್ತಿದೆ.
ಈ ಹಿಂದೆ ರಾತ್ರಿ ೯ರಿಂದ ಬೆಳಗ್ಗೆ ೭ರವರೆಗೆ ರ್ಫ್ಯೂ ವಿಧಿಸಲಾಗಿತ್ತು. ಆದರೆ ರ್ಫ್ಯೂ ನಡುವೆಯೂ ವಾಹನ ಸಂಚಾರ,ಅಂಗಡಿ ಮುಗಟ್ಟುಗಳು ತೆರೆದಿರುವುದು,ಜನರ ಓಡಾಟದ ಕಾರಣ ಅದು ಅಷ್ಟಾಗಿ ಪರಿಣಾಮಕಾರಿ ಆಗಲಿಲ್ಲ. ಕಳೆದ ಎರಡು ವಾರಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ಇಂದಿನಿಂದ ಕಟ್ಟುನಿಟ್ಟಾಗಿ ರ್ಫ್ಯೂ ಜಾರಿಯಾಗಲಿದೆ. ಈ ವೇಳೆಯಲ್ಲಿ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಬೇರೆ ಯಾವ ಚಟುವಟಿಕೆಗಳಿಗೂ ಅವಕಾಶ ಇರುವುದಿಲ್ಲ. ಇನ್ನು ಈ ಸಂರ್ಭದಲ್ಲಿ ಜನಸಾಮನ್ಯರು ಅನಗತ್ಯವಾಗಿ ಓಡಾಡುವುದು,ಮಾಸ್ಕ್ ಧರಿಸದೇ ಇರುವುದು, ಸೋಂಕು ಇದ್ದರೂ ಓಡಾಡುವುದು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕರ್ಫ್ಯೂ ಜಾರಿ-ಸಚಿವ ಬಸವರಾಜ್ ಬೊಮ್ಮಾಯಿ
Please follow and like us: